ಬೆಳಗಾವಿಯಿಂದ ಸ್ಪರ್ಧೆ ವಿಚಾರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರ್ಧಾರವೇನು..?

ಹುಬ್ಬಳ್ಳಿ,ಮಾರ್ಚ್,16,2024(www.justkannada.in): ಲೋಕಸಭೆ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಲಿದ್ದು ರಾಜಕೀಯ ಕಣ ರಂಗೇರಿದೆ. ಈ ಮಧ್ಯೆ ಹುಬ್ಬಳ್ಳಿ-ಧಾರವಾಡ ಅಥವಾ ಹಾವೇರಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಆ ಎರಡು ಕ್ಷೇತ್ರಗಳ ಟಿಕೆಟ್ ಕೈತಪ್ಪಿದ್ದು ಬೆಳಗಾವಿಯಿಂದ ಸ್ಪರ್ಧೆಗಿಳಿಯಲು ಒಪ್ಪಿದ್ದಾರೆ.

ಬೆಳಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದ್ದು ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ನಾನು ಬೆಳಗಾವಿಯಿಂದ  ಸ್ಪರ್ಧಿಸಲು ಒಪ್ಪಿದ್ದೇನೆ.  ಬೆಳಗಾವಿಯಲ್ಲಿ ನನಗೆ  ಮೊದಲಿನಿಂದಲೂ ಟಚ್ ಇದೆ. ನಾಳೆ ಬಿಜೆಪಿ 3ನೇ ಲಿಸ್ಟ್ ಬಿಡುಗಡೆಯಾಗಬಹುದು.  ನಾಳೆ ನನ್ನ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.

Key words: lokasabha election- Competition-Belgaum- decision – former CM- Jagdish Shettar.