ಬಿಜೆಪಿ ಪರ ಲಿಂಗಾಯತ ಸಮಾಜ: ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲಿದೆ- ಮಾಜಿ ಸಚಿವ ಮುರುಗೇಶ್ ನಿರಾಣಿ.

ಬೆಂಗಳೂರು,ನವೆಂಬರ್,11,2023(www.justkannada.in): ಲಿಂಗಾಯತ ಸಮಾಜ ಬಿಜೆಪಿ ಪರವಿದೆ. ಲೋಕಸಭೆ ಚುನಾವಣೆಯಲ್ಲಿ  ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಲಿದೆ ಎಂದು  ಮಾಜಿ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ. ವಿಜಯೇಂದ್ರ ಕುರಿತು ಮಾತನಾಡಿದ ಮುರುಗೇಶ್ ನಿರಾಣಿ, ದೀಪಾವಳಿ ಕೊಡುಗೆಯಾಗಿ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. 5 ದಶಕಗಳ ಕಾಲ ಯಡಿಯೂರಪ್ಪನವರು ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪನವರ ಮಾರ್ಗದರ್ಶನ ಬಿ.ವೈ.ವಿಜಯೇಂದ್ರ ಪಡೆದಿದ್ದಾರೆ. ಸೋಮಣ್ಣ, ಸಿ.ಟಿ.ರವಿ, ಅಶೋಕ್, ಅಶ್ವತ್ಥ್ ನಾರಾಯಣ್ ರೇಸ್​ನಲ್ಲಿದ್ದರು ಎಂದರು.

ಲಿಂಗಾಯತ ಸಮಾಜ 100ಕ್ಕೆ 90 ಪರ್ಸೆಂಟೇಜ್ ಬಿಜೆಪಿ ಪರ ಇದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ವೀರಶೈವ-ಲಿಂಗಾಯತರನ್ನು ಒಡೆಯುವ ಕುತಂತ್ರ ಕಾಂಗ್ರೆಸ್ ಮಾಡಿತ್ತು. ಲಿಂಗಾಯತರು ಬೇರೆ, ವೀರಶೈವರು ಬೇರೆ ಎನ್ನುವ ಕುತಂತ್ರ ಮಾಡಿತ್ತು ಎಂದು ಕಿಡಿಕಾರಿದರು.

Key words: Lingayat Samaja- BJP- Lok Sabha- elections- Former minister -Murugesh Nirani.