Friday, September 11, 2026

BDA Apartments

O último dia de um condenado : Descubra, Guarde, Compartilhe BDA JK_Adv BDA Adv
Home Front Page ರಾಜ್ಯದಲ್ಲಿ ಇನ್ಮುಂದೆ ಬಿಜೆಪಿಗೆ ಕಡಿಮೆ ಅವಕಾಶ: ‘ಕೈ’ ಸೇರಲು ಹಲವು ಶಾಸಕರ ಚಿಂತನೆ- ಲಕ್ಷ್ಮಣ್ ಸವದಿ

ರಾಜ್ಯದಲ್ಲಿ ಇನ್ಮುಂದೆ ಬಿಜೆಪಿಗೆ ಕಡಿಮೆ ಅವಕಾಶ: ‘ಕೈ’ ಸೇರಲು ಹಲವು ಶಾಸಕರ ಚಿಂತನೆ- ಲಕ್ಷ್ಮಣ್ ಸವದಿ

ಹುಬ್ಬಳ್ಳಿ,ನವೆಂಬರ್,9,2024 (www.justkannada.in): ರಾಜ್ಯದಲ್ಲಿ ಇನ್ಮುಂದೆ ಬಿಜೆಪಿಗೆ ಕಡಿಮೆ ಅವಕಾಶವಿದೆ. ಹೀಗಾಗಿ ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಉಪ ಚುನಾವಣೆ ಬಳಿಕ ಬಿಜೆಪಿ ಆಂತರಿಕ ಕಲಹ ಸ್ಪೋಟವಾಗುತ್ತೆ. ಬಿಜೆಪಿ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಕರ್ನಾಕಟದಲ್ಲಿಇನ್ಮುಂದೆ ಬಿಜೆಪಿಗೆ ಕಡಿಮೆ ಅವಕಾಶ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಚಿಂತಿಸಿದ್ದಾರೆ.  ಸಂಪರ್ಕಕ್ಕೆ ಇರುವವರ ಹೆಸರನ್ನು ಹೇಳುವುದಕ್ಕೆ ಆಗಲ್ಲ ಎಂದರು.

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಯತ್ನಾಳ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಮೂರು ತಂಡಗಳ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ಪಕ್ಷದಲ್ಲಿ ಗುಂಪುಗಾರಿಕೆ ತೀವ್ರಗೊಂಡಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ‌. ಬಿಜೆಪಿ  ಪಕ್ಷದಲ್ಲಿನ ಆಂತರಿಕ ಕಲಹ, ವೈಮನಸ್ಸಿನ ಕಾರಣದಿಂದ ತಮಗೆ ಮುಂದೆ ರಾಜಕೀಯದಲ್ಲಿ ಭವಿಷ್ಯವಿಲ್ಲವೆಂದು ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ ಮಾಡಿದ್ದಾರೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

Key words: Less, chance, BJP , state, Congress MLA, Laxman Savadi