Thursday, August 6, 2026

BDA Apartments

Home Front Page ಮರಿ ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿ ಚಿರತೆ: ನೋಡಲು ಮುಗ್ಗಿಬಿದ್ದ ಜನರು

ಮರಿ ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿ ಚಿರತೆ: ನೋಡಲು ಮುಗ್ಗಿಬಿದ್ದ ಜನರು

ಮಂಡ್ಯ, ಮಾರ್ಚ್, 20,2026 (www.justkannada.in):  ಮಮಂಡ್ಯ ಜಿಲ್ಲೆ ಹೊರವಲಯದ ಭೂತನ ಹೊಸೂರು ಗ್ರಾಮದಲ್ಲಿ  ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಕಬ್ಬಿನ ಗದ್ದೆಯಲ್ಲಿ ಇತ್ತೀಚೆಗೆ ಮೂರು ಚಿರತೆ ಮರಿಗಳು ಕಾಣಿಸಿದ ನಂತರ, ತಾಯಿ ಚಿರತೆಯ ಹಾವಳಿ ಹೆಚ್ಚಾಗಿತ್ತು. ಜನ ಜಾನುವಾರು ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರಿಗೆ ಜಮೀನುಗಳಿಗೆ ಹೋಗಲು ಭಯ ಆತಂಕ ಮನೆ ಮಾಡಿತ್ತು.

ಈ ನಡುವೆ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬೋನು ಇರಿಸಿದ್ದರು. ಈಗ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆ ಕಾರ್ಯಾಚರಣೆ ಯಶಸ್ವಿಯಿಂದ ಭೂತನ ಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬೋನಿಗೆ ಬಿದ್ದ ಚಿರತೆ ನೋಡಲು ಜನ ಮುಗಿಬಿದ್ದರು.

Key words: Mother leopard, cub, trap, ‍Forest, cage