ದಾವಣಗೆರೆ,ಫೆಬ್ರವರಿ,17,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ ಆಗಿಲ್ಲ ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಲಿ ಇದರಿಂದ ಗೊಂದಲ ಇರಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜು ಶಿವಗಂಗಾ, ಸಿಎಂ ಎರಡುವರೆ ವರ್ಷ ಒಪ್ಪಂದ ಆಗಿಲ್ಲ ಮಾತು ಕೊಟ್ಟಿಲ್ಲ ಎಂದು ಹೇಳಲಿ. ಕೂಡಲೇ ಹೈಕಮಾಂಡ್ ಎಂಟ್ರಿಯಾಗಿ ನಾಯಕತ್ವ ವಿಚಾರ ಇತ್ಯರ್ಥಪಡಿಸಬೇಕು. ಮುಖ್ಯಮಂತ್ರಿ ಹೇಳಿಕೆ ಗೊಂದಲಗಳಿಗೆ ಕೂಡಲೇ ಹೈಕಮಾಂಡ್ ಇದಕ್ಕೆ ಎಂಟ್ರಿಯಾಗಿ ಇತ್ಯಾರ್ಥ ಮಾಡಬೇಕು. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಎಲ್ಲರೂ ಶಕ್ತಿ ತೋರಿಸಬಾರದು . ಅವರಿಗೆ ಅವರದ್ದ ಆದ ಶಕ್ತಿ ಇದೆ. ಸರಿಯಾದ ಸಮಯದಲ್ಲಿ ಹೈಕಮಾಂಡ್ ಉತ್ತರಿಸುತ್ತದೆ ಎಂದು ಬಸವರಾಜು ಶಿವಗಂಗಾ ಹೇಳಿದರು.
ಕೆಲ ಶಾಸಕರ ವಿದೇಶಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗುವ ಅವಶ್ಯಕತೆ ಇರಲಿಲ್ಲ. ಬಜೆಟ್ಗೆ ಮುನ್ನ ವಿದೇಶ ಪ್ರವಾಸ ಹೋಗೋದು ಸರಿಯಲ್ಲ. ಅವರಿಗೂ ವೈಯಕ್ತಿಕ ಜೀವನ ಇರುತ್ತೆ ಹೋಗುತ್ತಾರೆ. ಅದನ್ನು ನಾವು ಯಾವುದೇ ಕಾರಣಕ್ಕೂ ಅಡ್ಡಿ ಪಡಿಸೋದಿಲ್ಲ ಎಂದರು.
Key words: Leadership change, CM, agreement, Congress MLA







