ಚೆನ್ನೈ, ಜೂ.೩೦, ೨೦೨೫: ಕರ್ನಾಟಕದಲ್ಲಿ 90,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು “ಒಂದು ಭಾಷೆಯ ಹೇರಿಕೆ”ಯಿಂದಾಗಿ ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಹೇಳಿದ್ದಾರೆ.
ಶಾಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರದ ಭಾಷಾ ನೀತಿ ಮತ್ತು ಶಿಕ್ಷಣ ನಿಧಿಯ ಬಗ್ಗೆ ಟೀಕಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಭಾಷಾ ಕಲಿಕೆಯು ವಿದ್ಯಾರ್ಥಿಗಳ ಆಯ್ಕೆಯಾಗಿರಬೇಕು ಎಂದ ಸಚಿವ, “ಮೂರನೇ ಭಾಷೆಯು ಒಂದು ಆಯ್ಕೆಯಾಗಿರಬೇಕು, ಬಲವಂತವಲ್ಲ” ಎಂದರು.
ಕೇಂದ್ರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅನ್ಬಿಲ್ ಮಹೇಶ್, ತಮಿಳುನಾಡು ಮತ್ತು ಕೇರಳದಂತಹ ಉನ್ನತ ಕಾರ್ಯಕ್ಷಮತೆಯ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಪ್ರಮುಖ ಶಿಕ್ಷಣ ನಿಧಿಯನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದರು.

“ಕೇಂದ್ರವು ಶಿಕ್ಷಣ ನಿಧಿಗಳ ಕತ್ತು ಹಿಸುಕುವ ಮೂಲಕ ರಾಜ್ಯಗಳಿಗೆ ಬೆದರಿಕೆ ಹಾಕುತ್ತಿದೆ. ಆದರೆ ಮುಖ್ಯಮಂತ್ರಿ ಸ್ಟಾಲಿನ್ ಮಧ್ಯಪ್ರವೇಶಿ ರಾಜ್ಯ ಸರಕಾರವೇ ಸಂಪೂರ್ಣ ವೆಚ್ಚವನ್ನು ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದರು.
ಹಿಂದಿನ ದಿನ, ಡಿಎಂಕೆ ಸಂಸದೆ ಕನಿಮೋಳಿ ಅವರು ತಮಿಳಿಗೆ ಹಿಂದಿ ಯಾವುದೇ ಭಾಷೆಯ ಶತ್ರುವಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಉತ್ತರ ಭಾರತೀಯರು ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯುವಂತೆ ಒತ್ತಾಯಿಸಿದರು. “ಹಿಂದಿ ಯಾವುದೇ ಭಾಷೆಯ ಶತ್ರುವಲ್ಲದಿದ್ದರೆ, ತಮಿಳು ಕೂಡ ಯಾವುದೇ ಭಾಷೆಯ ಶತ್ರುವಲ್ಲ. ಅವರು ತಮಿಳು ಕಲಿಯಲಿ. ಉತ್ತರ ಭಾರತದ ಜನರು ಕನಿಷ್ಠ ಒಂದು ದಕ್ಷಿಣ ಭಾರತೀಯ ಭಾಷೆಯನ್ನು ಕಲಿಯಲಿ. ಅದು ನಿಜವಾದ ರಾಷ್ಟ್ರೀಯ ಏಕೀಕರಣ” ಎಂದು ಅವರು ಹೇಳಿದರು.
ಹಿಂದಿ ಯಾವುದೇ ಭಾರತೀಯ ಭಾಷೆಯ ವಿರೋಧಿಯಲ್ಲ, ಬದಲಿಗೆ ಎಲ್ಲರಿಗೂ ಸ್ನೇಹಿತ ಮತ್ತು ದೇಶದಲ್ಲಿ ಯಾವುದೇ ಭಾಷೆಗೆ ಯಾವುದೇ ವಿರೋಧ ಇರಬಾರದು ಎಂದು ಶಾ ಇತ್ತೀಚೆಗೆ ಹೇಳಿದ್ದರು.
ಕೃಪೆ: ಇಂಡಿಯಾ ಟುಡೆ
key words: 90,000 students, Karnataka, failed, language imposition, DMK minister
SUMMARY:
90,000 students in Karnataka failed due to language imposition: DMK minister
Over 90,000 students in Karnataka have failed board exams due to “imposition of one language”, Tamil Nadu Education Minister Anbil Mahesh Poyyamoli has said. Addressing students at a school competition, he made the remarks while criticizing the central government’s language policy and education funding.