Saturday, August 15, 2026

BDA Apartments

Home Front Page ಮೇ 16 ರಂದು ಮೈಸೂರಿನಲ್ಲಿ ತಿರಂಗಯಾತ್ರೆ- ಮಾಜಿ ಶಾಸಕ ಎಲ್. ‌ನಾಗೇಂದ್ರ

ಮೇ 16 ರಂದು ಮೈಸೂರಿನಲ್ಲಿ ತಿರಂಗಯಾತ್ರೆ- ಮಾಜಿ ಶಾಸಕ ಎಲ್. ‌ನಾಗೇಂದ್ರ

ಮೈಸೂರು,ಮೇ,14,2025 (www.justkannada.in): ಆಪರೇಷನ್ ಸಿಂಧೂರ‌ ಕಾರ್ಯಾಚರಣೆಯಲ್ಲಿ ಭಾಗಿಯಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಲು ಮೇ 16 ರಂದು ಮೈಸೂರಿನಲ್ಲಿ ತಿರಂಗಯಾತ್ರೆ ಆಯೋಜನೆ ಮಾಡಲಾಗಿದೆ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಲ್ ‌ನಾಗೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ ಶಾಸಕ ಎಲ್.ನಾಗೇಂದ್ರ, ಮೇ 16 ರಂದು ಮೈಸೂರಿನಲ್ಲಿ ತಿರಂಗಯಾತ್ರೆ ಪಕ್ಷಾತೀತವಾಗಿ ನಡೆಯಲಿದೆ. ಮೈಸೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ತಿರಂಗ ಯಾತ್ರೆ‌ ಆರಂಭವಾಗಲಿದ್ದು, ಚಿಕ್ಕಗಡಿಯಾರ ವೃತ್ತದವರೆಗೂ ಸಾಗಿ ದೇವರಾಜ ಅರಸು ರಸ್ತೆ, ಜೆಎಲ್ ಬಿ ರಸ್ತೆಯ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Key words: Thiranga yatra, Mysore, BJP, L. Nagendra