ಕೆ.ಆರ್ ಎಸ್ ಸಂಪೂರ್ಣ ಭರ್ತಿ ಹಿನ್ನೆಲೆ: ನಾಳೆ ಸಿಎಂರಿಂದ ಬಾಗೀನ ಅರ್ಪಣೆ…

ಮಂಡ್ಯ,ಆ,28,2019(www.justkannada.in):  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಬಾಗೀನ ಅರ್ಪಣೆ ಮಾಡಲಿದ್ದಾರೆ.

ನಾಳೆ ಕೆ.ಆರ್ ಎಸ್ ಗೆ ಆಗಮಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಸಂಪ್ರದಾಯದಂತೆ ಕೆ.ಆರ್.ಎಸ್ ಜಲಾಶಯಕ್ಕೆ  ಬಾಗೀನ ಅರ್ಪಿಸಲಿದ್ದಾರೆ. ಈ ಬಾಗೀನ‌ ಕಾರ್ಯಕ್ರಮದಲ್ಲಿ   ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪಾಲ್ಗೊಳ್ಳಲಿದ್ದಾರೆ.

ಬಾಗೀನ ಅರ್ಪಣೆ ಬಗ್ಗೆ ಸಿ.ಎಂ.‌ಕಚೇರಿಯಿಂದ ಕಾವೇರಿ ನೀರಾವರಿ ನಿಗಮಕ್ಕೆ ಅಧಿಕೃತ ಅದೇಶ ರವಾನೆಯಾಗಿದ್ದು ಶುಕ್ರವಾರ ಬಾಗೀನ ಅರ್ಪಣೆಗೆ ಜಲಾಶಯದ ಅಧಿಕಾರಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

Key words: KRS -Full Fill – Tomorrow-CM BS yeddyurappa- worship