ಮೊದಲು ಬಿಜೆಪಿಯಲ್ಲಿರುವವರನ್ನ ಉಳಿಸಿಕೊಳ್ಳಲಿ- ಬಿಎಲ್ ಸಂತೋಷ್ ಗೆ ಜಗದೀಶ್ ಶೆಟ್ಟರ್ ಟಾಂಗ್.

ಹುಬ್ಬಳ್ಳಿ,ಸೆಪ್ಟಂಬರ್,1,2023(www.justkannada.in):  ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಸಂಘಟನಾಕಾರ್ಯದರ್ಶಿ ಬಿಎಲ್ ಸಂತೋಷ್ ಗೆ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್,  ಮೊದಲು ಬಿಜೆಪಿಯಲ್ಲಿರುವವರನ್ನ ಉಳಿಸಿಕೊಳ್ಳಲಿ. ಬಿಜೆಪಿ ಅಸ್ತಿತ್ವ ಉಳಿಸಿಕೊಂಡರೇ ಸಾಕಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ.  ಬರೀ ಅಪರೇಷನ್ ಮಾಡೋದೇ ಕೆಲಸವಾಗಿದೆ.  ಬಿಜೆಪಿಯಲ್ಲಿ ಹಿರಿಯರನ್ನ ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.

Key words: keep – BJP- first-Jagdish Shetter- Tong – BL Santhosh.