ಜಾತಿ ಗಣತಿ ವರದಿ ಬಗ್ಗೆ ಚರ್ಚೆಗೆ ಕರೆದರೇ ಸಿದ್ದ- ಜಯ ಪ್ರಕಾಶ್ ಹೆಗ್ಡೆ.

ಉಡುಪಿ,ಮಾರ್ಚ್,4,2024(www.justkannada.in):  ಇತ್ತೀಚೆಗಷ್ಟೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿಗಣತಿ ವರದಿ ಬಗ್ಗೆ ವಿರೋಧ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಜಯ ಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಜಯಪ್ರಕಾಶ್ ಹೆಗಡೆ ಅವರು,  ವರದಿ ಬಗ್ಗೆ ಚರ್ಚೆಗೆ ಕರೆದರೇ ಸಿದ್ದನಿದ್ದೇನೆ.  5.98ಕೋಟಿ ಜನಸಂಖ್ಯೆಯ ಸಮೀಕ್ಷೆ ಮಾಡಿದ್ದೇವೆ. ಸರ್ಕಾರ ಒಪ್ಪದೆ  ಜಾತಿಗಣತಿ ವರದಿ ಬಹಿರಂಗಪಡಿಸಲು  ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರ ಅಧಿಕೃತವಾಗಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

Key words: Jaya Prakash Hegde- discussion – caste census report.