Sunday, September 13, 2026

BDA Apartments

ಜ.21ರಿಂದ ಆರು ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ: ವೈವಿದ್ಯಮಯ ಕಾರ್ಯಕ್ರಮ...
Home Front Page ಜ.21ರಿಂದ ಆರು ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ: ವೈವಿದ್ಯಮಯ ಕಾರ್ಯಕ್ರಮ ಆಯೋಜನೆ…..

ಜ.21ರಿಂದ ಆರು ದಿನಗಳ ಕಾಲ ಸುತ್ತೂರು ಜಾತ್ರಾ ಮಹೋತ್ಸವ: ವೈವಿದ್ಯಮಯ ಕಾರ್ಯಕ್ರಮ ಆಯೋಜನೆ…..

ಮೈಸೂರು,ಜ,17,2020(www.justkannada.in):  ಜನವರಿ 21 ರಿಂದ 26 ರವರೆಗೆ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳವರ ಜಾತ್ರ ಮಹೋತ್ಸವ ನಡೆಯಲಿದ್ದು ವೈವಿದ್ಯಮಯ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ ಎಂದು ಜಾತ್ರ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಮಂಜುನಾಥ ತಿಳಿಸಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಾತ್ರ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅವರು,  ಸುತ್ತೂರು ಶ್ರೀ ಶಿವರಾತ್ರಿ  ದೇಶಿಕೇಂದ್ರ  ಸ್ವಾಮೀಜಿ ಸಾನ್ನಿಧ್ಯದಲ್ಲಿ ಆರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.  ಜಾತ್ರೆ ಅಂಗಗವಾಗಿ ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ,ದೋಣಿ ವಿಹಾರ, ಸೋಭಾನೆ ಪದ ಸ್ಪರ್ಧೆ, ಕ್ಯಾನ್ಸರ್ ತಪಸಾಣೆ ಶಿಬಿರ, ಸಾಮೂಹಿಕ ವಿವಾಹ, ರಾಜ್ಯ ಮಟ್ಟದ ಭಜನ ಮೇಳ, ಜನಗಳ ಜಾತ್ರೆ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯವಳಿ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜನವರಿ 21 ರಂದು ವೀರಭದ್ರೇಶ್ವರ ಕೋಂಡೋತ್ಸವ, ಜ. 22 ರಂದು ಹಾಲರವೇ ಉತ್ಸವ, ಜ.23ರಂದು ಸುತ್ತೂರು ರಥೋತ್ಸವ ,ಜ. 24ರಂದು ಲಕ್ಷ ದೀಪೋತ್ಸವ, ಜ.25ರಂದು  ತೆಪೋತ್ಸವ, ಜ.26 ರಂದು ಅನ್ನಬ್ರಹ್ಮೋತ್ಸವ ಸೇರಿದಂತೆ ಹಲವು ಧಾರ್ಮಿಕ ಕೈಂಕಾರ್ಯಗಳು ನಡೆಯಲಿವೆ. ಜಾತ್ರಾಮಹೋತ್ಸವದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೆಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ್ ಬೋಮ್ಮಯಿ, ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Key words: Jan. 21- suttur Jatra mahotsav-mysore- Various program