Sunday, August 30, 2026

BDA Apartments

Home Front Page ಖಾಲಿ ಇರುವ ಸಚಿವ ಸ್ಥಾನ ಕೂಡಲೇ ಭರ್ತಿ ಮಾಡಿ-  ಕೆ.ಎಸ್ ಈಶ್ವರಪ್ಪ ಆಗ್ರಹ.

ಖಾಲಿ ಇರುವ ಸಚಿವ ಸ್ಥಾನ ಕೂಡಲೇ ಭರ್ತಿ ಮಾಡಿ-  ಕೆ.ಎಸ್ ಈಶ್ವರಪ್ಪ ಆಗ್ರಹ.

ಶಿವಮೊಗ್ಗ,ಅಕ್ಟೋಬರ್,8,2022(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಖಾಲಿ ಇರುವ ಸಚಿವ ಸ್ಥಾನವನ್ನ ಕೂಡಲೇ ಭರ್ತಿ ಮಾಡಿ. ಚುನಾವಣೆ ಹಿನ್ನಲೆ ಕೂಡಲೇ ಕ್ಯಾಬಿನೆಟ್ ವಿಸ್ತರಣೆ ಮಾಡಬೇಕು.  ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್  ಯಡಿಯೂರಪ್ಪ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕುರುಬ ಸಮಾಜವನ್ನ ಎಸ್.ಟಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ,  ಕುಲಶಾಸ್ತ್ರ ಅಧ್ಯಯನ ಬಳಿಕ ತೀರ್ಮಾನ ಮಾಡಲಾಗುತ್ತದೆ.  ಕುರುಬ ಸಮಾಜವನ್ನ ಎಸ್ ಟಿಗೆ ಸೇರ್ಪಡೆ  ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

Key words: immediately- Cabinet- expansion-KS Eshwarappa