Friday, August 28, 2026

BDA Apartments

Home Front Page KPSC ಹಗರಣ: ನಾಪತ್ತೆಯಾಗಿದ್ದ IAS  ಅಧಿಕಾರಿ CID ವಿಚಾರಣೆಗೆ ಹಾಜರು

KPSC ಹಗರಣ: ನಾಪತ್ತೆಯಾಗಿದ್ದ IAS  ಅಧಿಕಾರಿ CID ವಿಚಾರಣೆಗೆ ಹಾಜರು

ಬೆಂಗಳೂರು,ಆಗಸ್ಟ್,28,2026 (www.justkannada.in):  ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬೆನ್ನಲ್ಲೆ ನಾಪತ್ತೆಯಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಇದೀಗ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಜ್ಞಾನೇಂದ್ರ ಕುಮಾರ್ ಈ ಹಿಂದೆ  ಕೆಪಿಎಸ್ ಸಿ ಪರೀಕ್ಷಾ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕೆಪಿಎಸ್ ಸಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿಯಾಗಿತ್ತು.

ಈ ನಡುವೆ ಇಡಿ ದಾಳಿ ಬೆನ್ನಲ್ಲೆ ಕಳೆದೊಂದು ವಾರದಿಂದ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿದ್ದರು. ಇದೀಗ  ಪ್ರತ್ಯಕ್ಷರಾಗಿದ್ದು ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: KPSC scam, Missing, IAS officer, Gyanendra Kumar, CID