ವಿವಾದಿತ ರಾಮಮಂದಿರ ನಿರ್ಮಾಣಕ್ಕೆ  ದೇಣಿಗೆ ಕೊಡಲ್ಲ ಎಂದಿದ್ದೆ- ಮಾಜಿ ಸಿಎಂ ಸಿದ್ಧರಾಮಯ್ಯ…

ನವದೆಹಲಿ,ಫೆಬ್ರವರಿ,16,2021(www.justkannada.in):  ರಾಮಮಂದಿರಾ ನಿರ್ಮಾಣಕ್ಕೆ ದೇಣಿಗೆ ಕೇಳಲು ಬಂದಿದ್ದರು. ಆದರೆ ನಾನು ವಿವಾದಿತ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲ್ಲ ಎಂದಿದ್ದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.jk

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದೇಣಿಗೆ ಕೊಡದವರ ಮನೆಯನ್ನು ಮಾರ್ಕ್ ಮಾಡಿ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದ್ದು, ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಈ ಹಿಂದೆಯೇ ರಾಮ ಮಂದಿರ ನಿರ್ಮಾಣ ಸಂಬಂಧ ಇಟ್ಟಿಗೆ ಮತ್ತು ಹಣ ಸಂಗ್ರಹಿಸಲಾಗಿತ್ತು. ಆದರೆ ಇಟ್ಟಿಗೆಯನ್ನು ಊರಾಚೆ ಬಿಸಾಡಿ ದುಡ್ಡನ್ನು ತೆಗೆದುಕೊಂಡು ಹೋಗಿದ್ದರು. ಇದೆಲ್ಲಾ ರಾಮನ ಲೆಕ್ಕ, ಕೃಷ್ಣ ಲೆಕ್ಕ ಎಂದು  ವ್ಯಂಗ್ಯವಾಡಿದರು.

Rastrapitha-Mahatma Gandhi- Remembrance- Former CM- Siddaramaiah
siddaramaih#profile..

ಪಿಎಂ ಕೇರ್ಸ್ ದೇ  ಲೆಕ್ಕ ಕೊಟ್ಟಿಲ್ಲ. ಇನ್ನು ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹದ ಮಾಹಿತಿ ನೀಡುತ್ತಾರಾ ಎಂದು ಪ್ರಶ್ನಿಸಿರುವ ಸಿದ್ಧರಾಮಯ್ಯ. ವಿವಾದಿತ ಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಅದರ ಬದಲಿಗೆ ಬೇರೆ ಕಡೆ ಕಟ್ಟುವುದಾದರೆ ದೇಣಿಗೆ ನೀಡುತ್ತೇನೆ ಎಂದಿದ್ದಾರೆ.

Key words: I not – donate – construction – controversial –ramamandir-Former CM -Siddaramaiah.