Sunday, August 16, 2026

BDA Apartments

Home Front Page ಶ್ರೀರಾಮುಲುಗಿಂತಲೂ ನಾನು ಹಿರಿಯವನು: ಮೊದಲ ಕಂತಿನಲ್ಲಿ ಸಚಿವನಾಗಬೇಕಿತ್ತು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಶ್ರೀರಾಮುಲುಗಿಂತಲೂ ನಾನು ಹಿರಿಯವನು: ಮೊದಲ ಕಂತಿನಲ್ಲಿ ಸಚಿವನಾಗಬೇಕಿತ್ತು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಬೆಂಗಳೂರು,ಡಿ,14,2019(www.justkananda.in): ನಾನು ಮೊದಲ ಕಂತಿನಲ್ಲೇ ಸಚಿವನಾಗಬೇಕಿತ್ತು. ಆದರೆ ಪಕ್ಷಕ್ಕೋಸ್ಕರ್ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದೇನೆ ಎಂದು ಶ್ರೀರಾಮುಲು ಅಸಮಾಧಾನ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀರಾಮುಲುಗಿಂತಲೂ ನಾನು ಹಿರಿಯವನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಮೊದಲು ನಾನು ಮಂತ್ರಿಯಾಗಬೇಕಿತ್ತು. ಆದ್ರೆ ಪಕ್ಷಕ್ಕಾಗಿ ತ್ಯಾಗಮಾಡಿದ್ದೇನೆ. ಶ್ರೀರಾಮುಲು ಅವರ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇರುವುದು ಸತ್ಯ. ಶ್ರೀರಾಮುಲು ಸಮಸ್ಯೆಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಗೆಹರಿಸುತ್ತಾರೆ. ಬಿಎಸ್ ವೈ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ನಡೆಯಲಿದೆ ಎಂದು ತಿಳಿಸಿದರು.

ನಮಗಾಗಿ 17 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಂದಿದ್ದಾರೆ.  ಹೀಗಾಗಿ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.  ಬಿಜೆಪಿ ಸರ್ಕಾರಕ್ಕಾಗಿ ತ್ಯಾಗ ಮಾಡಿರುವವರ ರಕ್ಷಣೆ ನಮ್ಮ ಆದ್ಯತೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ತಿಳಿಸಿದರು.

Key words: I am –older- than- Sriramulu-minister post-MLA -Basanagowda Patil Yatnal.