ಕೆಪಿಸಿಸಿಯ ಯಾವುದೇ ಹುದ್ದೆಗಳಿಗೆ ನಾನು ಆಕಾಂಕ್ಷೆ ಅಲ್ಲ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಆಗಸ್ಟ್ 05, 2023 (www.justkannada.in): ಕೆಪಿಸಿಸಿಯ ಯಾವುದೇ ಹುದ್ದೆಗಳಿಗೆ ನಾನು ಆಕಾಂಕ್ಷೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಪಿಸಿಸಿಯ ಯಾವುದೇ ಹುದ್ದೆಗಳಿಗೆ ನಾನು ಆಕಾಂಕ್ಷೆ ಅಲ್ಲ ಎಂದು ತಿಳಿಸಿದ್ದಾರೆ.

ಈಗ ನನಗೆ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ಬೇಡ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಇದ್ದಾರೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ನಾನು ಯಾವತ್ತೂ ಸಚಿವ ಸ್ಥಾನ ಕೇಳಿಲ್ಲ ಸಚಿವ ಸ್ಥಾನದ ಕುರಿತು ನನಗೆ ಅಸಮಾಧಾನವು ಇಲ್ಲ. ನನಗೆ ವ್ಯವಸ್ಥೆಯ ವಿರುದ್ಧ ಅಸಮಾಧಾನವಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.