Friday, August 21, 2026

BDA Apartments

Home Front Page 52 ಪ್ರಕರಣಗಳ ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ- ಗೃಹ ಸಚಿವ ಪರಮೇಶ್ವರ್

52 ಪ್ರಕರಣಗಳ ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮೇ,22,2026 (www.justkannada.in):  ಕಾನೂನಾತ್ಮಕವಾಗಿ  52 ಪ್ರಕರಣಗಳನ್ನ ಹಿಂಪಡೆಯಬಹುದು ಎಂದು  ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,   ಕನ್ನಡ ಸಂಘಟನೆಗಳು ರೈತರ ಮೇಲೆ ಇದ್ದ ಕೇಸ್ ಬಗ್ಗೆ ಶಿಫಾರಸು ಮಾಡಲಾಗಿತ್ತು.  ಕ್ಯಾಬಿನೆಟ್ ಸಬ್ ಕಮಿಟಿಗೆ ರಾಜ್ಯ ಸರ್ಕಾರ ಶಿಪಾರಸ್ಸು ಮಾಡಿತ್ತು.  ಕಾನೂನಾತ್ಮಕವಾಗಿ ಕೇಸ್ ಹಿಂಪಡೆಯಲು ತೀರ್ಮಾನ ಆಗಿದೆ. 52 ಕೇಸ್ ಹಿಂಪಡೆಯಬಹುದು ಎಂದು ಸಂಪುಟ ತೀರ್ಮಾನ ಮಾಡಿದೆ ಎಂದರು.

ಪೆಟ್ರೋಲ್ ಡೀಸೆಲ್ ಕೆಎಸ್ ಟಿ ಕಡಿಮೆ ಮಾಡಬೇಕೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್,  ಕೇಂದ್ರ ಜಾಸ್ತಿ ಮಾಡೋದು, ನಾವು ಕಡಿಮೆ ಮಾಡೋದಾ?  ಕೇಂದ್ರ ಸರ್ಕಾರಕ್ಕೆ ಜನಪರ ಚಿಂತನೆ ಇಲ್ಲ ಜವಾಬ್ದಾರಿ ಇಲ್ಲ.  ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದ ತೆರಿಗೆ ಹಣ ಬಂದಿಲ್ಲ.  ಮತ್ತೆ ತೈಲಬೆಲೆ ಕಡಿಮೆ ಮಾಡಿ ಎಂದು ಹೇಳುವುದಕ್ಕೆ ಆಗುತ್ತಾ?  ಡಾ ಮನ್ ಮೋಹನ್ ಸಿಂಗ್ ಸರ್ಕಾರ ಇದ್ದಾಗ ತೈಲಬೆಲೆ ಎಷ್ಟಿತ್ತು?  ಈಗ ಎಷ್ಟಿದೆ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

Key words: Cabinet meeting, withdraw, 52 cases, Home Minister, Parameshwar