Saturday, August 8, 2026

BDA Apartments

Home Front Page ಭಾರಿ ಮಳೆ ಹಿನ್ನೆಲೆ:  ಅಲಮಟ್ಟಿ ಡ್ಯಾಂನಿಂದ ನೀರು ಹೊರ ಬಿಡುವಂತೆ ಮನವಿ ಮಾಡಿ  ಕರ್ನಾಟಕ ಸರ್ಕಾರಕ್ಕೆ...

ಭಾರಿ ಮಳೆ ಹಿನ್ನೆಲೆ:  ಅಲಮಟ್ಟಿ ಡ್ಯಾಂನಿಂದ ನೀರು ಹೊರ ಬಿಡುವಂತೆ ಮನವಿ ಮಾಡಿ  ಕರ್ನಾಟಕ ಸರ್ಕಾರಕ್ಕೆ ಸಾಂಗ್ಲಿ ಜಿಲ್ಲಾಧಿಕಾರಿಯಿಂದ ಪತ್ರ…

ಸಾಂಗ್ಲಿ,ಆ,3,2019(www.justkannada.in):  ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಅಲಮಟ್ಟಿ ಡ್ಯಾಂನಿಂದ ನೀರು ಹೊರ ಬಿಡುವಂತೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌದರಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು 2,39521 ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನ ಅಲಮಟ್ಟಿ ಡ್ಯಾಂನಿಂದ ಹೊರಬಿಡುವಂತೆ ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌಧರಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಅಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 519.60 ಮೀಟರ್ ಗಳು. 518 ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ.

ರಾಜ್ಯಸರ್ಕಾರಕ್ಕೆಲ್ಲದೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೂ ಪತ್ರವನ್ನ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

Key words: Heavy rain -Letter – Sangli –DC- Government of Karnataka- water -Alamatti Dam.