Wednesday, July 29, 2026

BDA Apartments

Home Front Page ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಮತ್ತು ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಹೆಚ್.ಡಿಕೆ ಟೀಕೆ..

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಮತ್ತು ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಹೆಚ್.ಡಿಕೆ ಟೀಕೆ..

ಬೆಂಗಳೂರು,ಅಕ್ಟೋಬರ್,6,2022(www.justkannada.in): ಕಾಂಗ್ರೆಸ್  ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಮತ್ತು ಬಿಜೆಪಿ ನಡೆಸಿದ ಜನಸ್ಪಂದನಾ ಕಾರ್ಯಕ್ರಮದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆ ಉದ್ದೇಶವೇನು ಎಂದು ಜನರಿಗೆ ಗೊತ್ತೇ ಇಲ್ಲ . ಮೇಕೆದಾಟು ವಿಚಾರವಾಗಿ  ದೊಡ್ಡಮಟ್ಟದಲ್ಲಿ ಪಾದಯಾತ್ರೆ ಮಾಡಿದರು.  ಮೇಕೆದಾಟು ಅಲ್ಲಿಯೇ ಇದೆ ಇನ್ನೇನು ಆಗಲಿಲ್ಲ. ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಜನರ ಬದುಕಲ್ಲಿ ಏನು ಬದಲಾವಣೆಯಾಗಲ್ಲ ಎಂದು ಟಾಂಗ್ ನೀಡಿದರು.

ಹಾಗೆಯೇ ಬಿಜೆಪಿ ಜನಸ್ಪಂದನಾ ಯಾತ್ರೆ ಬಗ್ಗೆ ಟೀಕಿಸಿದ ಹೆಚ್.ಡಿ ಕುಮಾರಸ್ವಾಮಿ,  ಬಿಜೆಪಿಯವರು ಜನಸ್ಪಂದನಾ ಕಾರ್ಯಕ್ರಮ ಮಾಡಿದ್ರು. ಜನಸ್ಪಂದನಾ ಕಾರ್ಯಕ್ರಮದಲ್ಲಿ ತೊಡೆ ತಟ್ಟಿದ್ದು ಶಕ್ತಿ ಪ್ರದರ್ಶನ ಬಿಟ್ರೆ ಬೇರೇನೂ ಮಾಡಲಿಲ್ಲ. ಸರ್ಕಾರ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಲೇ ಇಲ್ಲ ಎಂದು ಕುಟುಕಿದರು.

Key words: HD Kumaraswamy- criticizes –Congress – BJP