ಗ್ರಾಪಂ ಚುನಾವಣೆ ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣುತ್ತಿದೆ : ಸಚಿವ ಆರ್.ಅಶೋಕ್

ಬೆಂಗಳೂರು,ಡಿಸೆಂಬರ್,30,2020(wwww.justkannada.in) : ಗ್ರಾಪಂ ಚುನಾವಣೆ ಎಲ್ಲಾ ಕಡೆ ಬಿಜೆಪಿ ಶಕ್ತಿ ಎದ್ದು ಕಾಣುತ್ತಿದೆ. ಗ್ರಾಪಂ ಮಟ್ಟದಲ್ಲಿಯು ಬಿಜೆಪಿ ಹಿಡಿತ ಸಾಧಿಸುತ್ತಿದ್ದು, ಕಾಂಗ್ರೆಸ್ ಗೆ ಹಿನ್ನೆಡೆ ಕಂಡು ಬರುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಗ್ರಾಮಪಂಚಾಯ್ತಿ ‌ಚುನಾವಣೆ ಫಲಿತಾಂಶ ವಿಚಾರ ಕುರಿತು ಮಾತನಾಡಿರುವ ಅವರು, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದ್ದು, ಜನರ ಧ್ವನಿಯಾಗಿ ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡ್ತೇವೆ ಎಂದರು.

ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಪಾಠವಾಗಬೇಕು…!

ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ವಿಚಾರವಾಗಿ, ಡೆತ್ ನೋಟ್ ನಲ್ಲಿ ಎರಡು ಅಂಶ ಹೇಳಿದ್ದಾರೆ. ಪರಿಷತ್ ಗಲಾಟೆ ನೋವು ತಂದಿದೆ ಎಂದಿದ್ದಾರೆ. ತನಿಖೆಯ ನಂತರ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ.

Grapham,election,all,BJP's,power,rise,Minister,R. Ashok

ಸೀಟಿನಲ್ಲಿ  ಕೂತರೆ ಆಕಾಶವೇನು ಕೆಳಗೆ ಬೀಳ್ತಿರಲಿಲ್ಲ. ಶಂಕರ್ ಮೂರ್ತಿ ಹಿಂದೆ ಕೆಳಗೆ ಕುಳಿತಿದ್ದರು. ಅದರಂತೆ ಧರ್ಮೇಗೌಡರು ನಡೆದುಕೊಂಡಿದ್ರು. ಇಂತಹ ಘಟನೆ ಮರುಕಳಿಸಬಾರದು. ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಪಾಠವಾಗಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

key words : Grapham-election-all-BJP’s-power-rise-Minister-R. Ashok