Thursday, July 30, 2026

BDA Apartments

Home Front Page ಮೈ ಶುಗರ್ ಕಾರ್ಖಾನೆ  ಪುನಾರಂಭಕ್ಕೆ ಸರ್ಕಾರ ಬದ್ಧ-ಸಚಿವ ಕೆ.ಗೋಪಾಲಯ್ಯ.

ಮೈ ಶುಗರ್ ಕಾರ್ಖಾನೆ  ಪುನಾರಂಭಕ್ಕೆ ಸರ್ಕಾರ ಬದ್ಧ-ಸಚಿವ ಕೆ.ಗೋಪಾಲಯ್ಯ.

ಮಂಡ್ಯ,ಫೆಬ್ರವರಿ,26,2022(www.justkannada.in):  ರೈತರ ಜೀವನಾಡಿ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಮೈ ಶುಗರ್ ಕಾರ್ಖಾನೆ ಆರಂಭ ವಿಚಾರದಲ್ಲಿ ಮುಖ್ಯಮಂತ್ರಿಗಳು ಈ ಹಿಂದೆ ನೀಡಿರುವ ಹೇಳಿಕೆಗೆ ಬದ್ಧರಾಗಿದ್ದಾರೆ. ಸಂಸದರು, ಶಾಸಕರು, ರೈತರೊಂದಿಗೆ ನಡೆದ ಸಭೆಯ ಮಾತುಕತೆಯಂತೆ ನಮ್ಮ ಸರ್ಕಾರ ನಡೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.gop

ನಾಳೆಯಿಂದ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋಪಾಲಯ್ಯ, ರಾಜ್ಯದ ಜನ ಕಾಂಗ್ರೆಸ್ ಗೆ ಐದು ವರ್ಷಗಳ ಕಾಲ ಅಧಿಕಾರ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬಹುದಿತ್ತು. ಅವರು ಏಕೆ ಮಾಡಲಿಲ್ಲ.  ಮೇಕೆದಾಟು ಯೋಜನೆಯನ್ನು ನಮ್ಮಸರ್ಕಾರ  ಜಾರಿಗೆ ತರಲಿದೆ ಎಂದು ತಿಳಿಸಿದರು.

Key words: Government – restart -My Sugar- factory