ಜೆಎಸ್ ಎಸ್ ವೈದ್ಯಕೀಯ ಕಾಲೇಜಿನಲ್ಲಿವಿಶ್ವ ಕ್ಷಯರೋಗ ದಿನಾಚರಣೆ

ಮೈಸೂರು, 18 ಮಾರ್ಚ್ 2023 (www.justkannada.in): ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗ, ಮೈಸೂರು ಜಿಲ್ಲಾ ಕ್ಷಯರೋಗ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಮಹಮ್ಮದ್ ಶಿರಾಜ್ ಅಹಮದ್, ನಮ್ಮ ದೇಶದಲ್ಲಿ ಕ್ಷಯರೋಗದ ಹೊರೆ ಮತ್ತು ರೋಗವನ್ನು ಎದುರಿಸಲು ಪ್ರಯತ್ನಿಸುವುದು, 2025 ರ ವೇಳೆಗೆ ಕ್ಷಯ ರೋಗ ನಿವಾರಣೆಗೆ ಗುರಿಯತ್ತ ಶ್ರಮಿಸುತ್ತಿರುವ ವಿವಿಧ ಹಂತಗಳು, ವಿವಿಧ ವಿಭಾಗಗಳ ಕಾರ್ಯಗಳ ಬಗ್ಗೆ ಪ್ರತಿನಿಧಿಗಳ  ಕುರಿತು ಮಾತನಾಡಿದರು.  ಇದೇ ವೇಳೆ ಕ್ಷಯರೋಗ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಡಾ. ಮೊಹಮ್ಮದ್ ಶಿರಾಜ್ ಅಹಮದ್ ಅವರನ್ನು ಸನ್ಮಾನಿಸಲಾಯಿತು.

ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಕಮ್ಯುನಿಟಿ ಮೆಡಿಸಿನ್ ಕ್ರಾನಿಕಲ್, ಮಾಸಿಕ ಇ-ಸುದ್ದಿಪತ್ರವನ್ನು (ಮೊದಲ ಸಂಚಿಕೆ) ಬಿಡುಗಡೆ ಮಾಡಲಾಯಿತು.

‘ವೀ ಕ್ಯಾನ್ ಎಂಡ್ ಟಿಬಿ’ ವಿಷಯದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು (ಪ್ರಿ ಕ್ಲಿನಿಕಲ್) ಡಾ.ಸುಮಾ ಎಂ.ಎನ್,  ಉಪ ಪ್ರಾಂಶುಪಾಲರು (ಪ್ಯಾರಾ ಕ್ಲಿನಿಕಲ್) ಡಾ.ಪ್ರವೀಣ್ ಕುಲಕರ್ಣಿ, ಉಪ ಪ್ರಾಂಶುಪಾಲರು (ಕ್ಲಿನಿಕಲ್) ಡಾ. ಎಂ.ಮಂತಪ್ಪ, , ಆಡಳಿತಾಧಿಕಾರಿ ಶ್ರೀ ಎಸ್.ಆರ್.ಸತೀಶ್ಚಂದ್ರ, ಸಂಘಟನಾ ಅಧ್ಯಕ್ಷ ಡಾ. ಸುನೀಲ್ ಕುಮಾರ್ ಡಿ, ಡಾ.ನಯನಾಬಾಯಿ ಶಾಬಾದಿ ಇತರರು ಪಾಲ್ಗೊಂಡಿದ್ದರು.