ಪೈಲ್ಸ್ ಚಿಕಿತ್ಸೆಗಾಗಿ ಹಣ ಕೇಳಿದ  ಪತ್ನಿ: ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಮೈಸೂರು,ಅಕ್ಟೋಬರ್,24,2021(www.justkannada.in): ಪೈಲ್ಸ್ ಚಿಕಿತ್ಸೆಗಾಗಿ ಹಣ ಕೇಳಿದ ಪತಿ ಹಣ ಕೇಳಿದ್ದು ಈ ವಿಚಾರಕ್ಕೆ ಗಲಾಟೆ ನಡೆದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರಾಜೀವ್ ನಗರದಲ್ಲಿ ಈ ಘಟನೆ ನಡೆದಿದೆ. ಎಲ್.ಐ.ಸಿ.ಏಜೆಂಟ್ ಫ್ರಾಂಕ್ ವಿನೋದ್(46) ಮೃತ ದುರ್ದೈವಿ. ಕುಡಿತದ ಚಟಕ್ಕೆ ಬಿದ್ದಿದ್ದ ಫ್ರಾಂಕ್ ವಿನೋದ್. ದುಡಿದ ಹಣವೆಲ್ಲಾ ಖರ್ಚು ಮಾಡುತ್ತಿದ್ದ. ಈ ನಡುವೆ ಪೈಲ್ಸ್ ನಿಂದ ಬಳಲುತ್ತಿದ್ದ ಪತ್ನಿ ಚಿಕಿತ್ಸೆಗಾಗಿ ಹಣ ಕೇಳಿದ್ದಾರೆ.

ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಆಗಿದೆ. ಇದರಿಂದ ಮನನೊಂದ ಫ್ರಾಂಕ್ ವಿನೋದ್ ಕುಡಿದ ಮತ್ತಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Wife – money – treatment-.Husband -surrenders – suicide