ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ವಿಜಯ್ ಕುಲಕರ್ಣಿ ಕಾರು: ಇಬ್ಬರು ಸಾವು….

ಧಾರವಾಡ,ಏಪ್ರಿಲ್,12,2021(www.justkannada.in):  ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಸಹೋದರ ವಿಜಯ್‌ ಕುಲಕರ್ಣಿ ಕಾರು ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.Agriculture,Pumpset,Adequate,Electricity,giving,Ask,Protest 

ಧಾರವಾಡದ  ಕೆವಿಜಿ ಬ್ಯಾಂಕ್‌ ಎದುರು ಈ ಘಟನೆ ನಡೆದಿದೆ. ಶೇಖರ್ ಮತ್ತು ಚರಣ್ ನಾಯಕ್ ಮೃತಪಟ್ಟವರು ಎನ್ನಲಾಗಿದೆ. ವಿಜಯ್ ಕುಲಕರ್ಣಿ ಚಲಾಯಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದು ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ 6 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.vijay-kulkarni-car-accident-two-deaths-dharawad

ಈ ವೇಳೆ ಸ್ಥಳದಲ್ಲಿದ್ದ ಜನರು ಮುತ್ತಿಗೆ ಹಾಕುತ್ತಿದ್ದಂತೆ ವಿಜಯ್ ಕುಲಕರ್ಣಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಧಾರವಾಢ ಸಂಚಾರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Key words: Vijay Kulkarni- car- accident-Two -deaths-dharawad