ತಲೆ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿ ಹಿಡಿದು ರೈತ ವಿರೋಧಿ ಮಸೂದೆಗಳ ವಿರುದ್ಧ ಪ್ರತಿಭಟನೆ  

ಮೈಸೂರು,ಸೆಪ್ಟೆಂಬರ್,28,2020 (www.justkannada.in) : ತಲೆಯ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿಯನ್ನು ಹಾಕಿಕೊಂಡು ಬೆಂಗಳೂರಿಗೆ ತೆರಳುವ ಬಸ್ ತಡೆದು ರೈತರು ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.

jk-logo-justkannada-logo

ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯು, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಘಟನೆ ಸದಸ್ಯರು ನಿಲ್ದಾಣದಲ್ಲಿದ್ದ ಎರಡು ಬಸ್ ಗಳನ್ನು ತಡೆದು ಆಕ್ರೋಶವ್ಯಕ್ತಪಡಿಸಿದರು.

 Stones-head-heels-shoulders-picasies-protest

ರೈತ ವಿರೋಧಿ ಮಸೂದೆಗಳ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಈ ಸಂದರ್ಭ ಪ್ರತಿಭಟನಕಾರರ ಪ್ರತಿರೋಧದ ನಡುವೆಯೂ ಪೊಲೀಸರು ಒಂದು ಬಸ್ ಕಳುಹಿಸಿದರು. ಮತ್ತೊಂದು ಬಸ್ ಅನ್ನು ಮುಂದೆ ಚಲಿಸದಂತೆ ಕುಳಿತು ಪ್ರತಿಭಟನಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

key words : Stones-head-heels-shoulders-picasies-protest