ಪೊಲೀಸ್ ದಂಪತಿ ನೇಣಿಗೆ ಶರಣು…!

ಬೆಂಗಳೂರು,ಡಿಸೆಂಬರ್,18,2020(www.justkannada.in) : ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಪೊಲೀಸ್ ದಂಪತಿ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.Teachers,solve,problems,Government,bound,Minister,R.Ashokಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಕಾನ್ ಸ್ಟೆಬಲ್ ಶೀಲಾ ಮತ್ತು ಬಾಗಲೂರು ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕೆಯ ಪತಿ ಎಚ್.ಸಿ.ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.Police-Couple-Surrender ...!ನಿನ್ನೆ ಮೀಟಿಂಗ್ ಹಿನ್ನೆಲೆ ರಾತ್ರಿವರೆಗೂ ಎಸಿಪಿ ಕಚೇರಿಯಲ್ಲಿಯೇ ಇದ್ದ ಸುರೇಶ್ ನಂತರ ಮನೆಗೆ ತೆರಳಿದ್ದಾರೆ.  ಆದರೆ, ಬೆಳಿಗ್ಗೆ ಹೊತ್ತಿಗೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ಈ ಪ್ರಕರಣ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

key words : Police-Couple-Surrender …!