”ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ”’ : ನಟ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದು, ಯಾರಿಗೆ…?

ಬೆಂಗಳೂರು,ಡಿಸೆಂಬರ್,27,2020(www.justkannada.in) : ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ಕಿಚ್ಚ ಸುದೀಪ್ ಸಿಡಿದೆದ್ದಿದ್ದು, ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ಪ್ರತಿಮೆ ಧ್ವಂಸ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.Teachers,solve,problems,Government,bound,Minister,R.Ashok

ಟ್ವೀಟರ್ ನಲ್ಲಿ ಮಾತನಾಡಿರುವ ಕಿಚ್ಚ ಸುದೀಪ್, ಪ್ರತಿಮೆ ಒಡೆದು ಹಾಕಿರುವ ಮಹಾನುಭಾವರಿಗೆ ಒಂದಿಷ್ಟು ವಿಷಯ ಹೇಳೋಕೆ ಇಷ್ಟ ಪಡುತ್ತೇನೆ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ. ಏಕೆಂದರೆ ಪ್ರತಿಮೆ ಯಾರು ಹೊಡೆದು ಹಾಕಿದ್ದಾರೋ ಅವರು ಸಿಕ್ಕಿಹಾಕಿಕೊಂಡರೆ ವಿಷ್ಣು ಅಭಿಮಾನಿಗಳು ಹೀನಾಯವಾಗಿ ಹೊಡೆದು ಹಾಕುತ್ತಾರೆ ಎಂದು ಹೇಳಿದ್ದಾರೆ.

ನಿಮ್ಮ ಉದ್ದೇಶ ಅರ್ಥ ಆಗಲು ಸಾಧ್ಯವಿಲ್ಲ. ಮನುಷ್ಯರಾದವರಿಗೆ ಅದು ಅರ್ಥವೂ ಆಗಲ್ಲ. ಆದರೆ, ದಯವಿಟ್ಟು ಸಿಕ್ಕಿ ಹಾಕಿಕೊಳ್ಳದ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.

 

Please-don't-get-caught-Actor-Sudeep-warned-whom ...

ನಿಮ್ಮ ಹೆಸರು ಹೊರಗೆ ಬಂದರೆ ಮುಂದೆ ನಡೆಯುವುದನ್ನು ಖಂಡಿತವಾಗಿ ಯಾರು ತಡೆಯಲು ಸಾಧ್ಯವಿಲ್ಲ. ಆ ಮೂರ್ತಿ ಬಿಡಿ, ಅದರ ಅಪ್ಪನ ಹಾಗಿದ್ದು ಮೂರ್ತಿ ಕಟ್ಟುತ್ತೇವೆ ಅದು ಬೇರೆ ವಿಷಯ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

key words : Please-don’t-get-caught-Actor-Sudeep-warned-whom …