ನಾಗಪಂಚಮಿ ಸಂಭ್ರಮಕ್ಕೂ ತಟ್ಟಿದ ಕೊರೋನಾ ಎಫೆಕ್ಟ್ : ಬೆರಳೆಣಿಕೆಯಷ್ಟು ಭಕ್ತರಿಂದ ಪೂಜೆ ಸಲ್ಲಿಕೆ…..

ಮೈಸೂರು,ಜು,25,2020(www.justkannada.in):  ಇಂದು ಎಲ್ಲೆಡೆ ನಾಗ ಪಂಚಮಿ ಸಂಭ್ರಮವಾಗಿದ್ದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಕ್ತರು ನಾಗರಾಜನಿಗೆ ಹಾಲನೆರೆದು ಕಷ್ಟ ಕಾರ್ಪಣ್ಯಗಳನ್ನ ದೂರ ಮಾಡುವಂತೆ ಪ್ರಾರ್ಥಿಸಿದರು.jk-logo-justkannada-logo

ನಾಗಪಂಚಮಿ ಹಿನ್ನೆಲೆ ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ  ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆಯಿಂದಲೇ ನಾಗರಾಜನಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿತು.  ಇದೇ ವೇಳೆ ಭಕ್ತರು ನಾಗರಾಜನಿಗೆ ಹಾಲೆರೆದು ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿದರು.nagpanchami-celebration-mysore-devotees-worshipe

ಇನ್ನು ಪ್ರತಿ ವರ್ಷ ಅಮೃತೇಶ್ವರ ದೇವಾಲಯಕ್ಕೆ ಸಾವಿರಾರು ಭಕ್ತಾದಿಗಳು  ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಈ ಬಾರಿ ಕೊರೋನಾ ಆತಂಕದಿಂದ ಬೆರಳೆಣಿಕೆಯಷ್ಟು ಮಾತ್ರ ಭಕ್ತರು ಭಾಗಿಯಾಗಿದ್ದರು. ಮಾಸ್ಕ್ ಧರಿಸಿಯೇ ಭಕ್ತರು ನಾಗದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

Key words: Nagpanchami -celebration – Mysore-Devotees – worshipe