BREAKING NEWS : ಮೈಸೂರು : ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರಕ್ಕೆ ಬಿಜೆಪಿ ಆಕ್ಷೇಪ.

 

ಮೈಸೂರು, ನ.24, 2021 : (www.justkannada.in news ) ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಕ್ಷೇಪ.

ನಾಮಪತ್ರದಲ್ಲಿನ ಹಲ ಲೋಪಗಳನ್ನು ಉಲ್ಲೇಖಿಸಿ ಆಕ್ಷೇಪಣೆ. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆ ಬಿಜೆಪಿ ಆಕ್ಷೇಪ.
ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಒಟ್ಟು 8ನಾಮಪತ್ರ ಸಲ್ಲಿಕೆಯಾಗಿತ್ತು. ಬಿಜೆಪಿಯಿಂದ ಆರ್. ರಘು ಕೌಟಿಲ್ಯ, ಕಾಂಗ್ರೆಸ್ ನಿಂದ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನಿಂದ ಎನ್.ಮಂಜೇಗೌಡ ಸ್ಪರ್ಧೆ. ಕನ್ನಡ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸೇರಿ ಪಕ್ಷೇತರವಾಗಿ ಒಟ್ಟು 8 ಮಂದಿಯಿಂದ ನಾಮಪತ್ರ.
ಇಂದು ಚುನಾವಣಾಧಿಕಾರಿಗಳಿಂದ ನಾಮಪತ್ರ ಪರಿಶೀಲನೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ. ಇದೀಗ ಕುತೂಹಲ ಮೂಡಿಸಿರುವ ನಡೆ.

ಆಕ್ಷೇಪಣೆಯಲ್ಲಿ ಗಂಭೀರ ಅಂಶಗಳಿರುವ ಬಗ್ಗೆ ಪರಿಶೀಲನೆ ನಡೆಸಲಿರುವ ಜಿಲ್ಲಾ ಚುನಾವಣಾಧಿಕಾರಿಗಳು. ಬಳಿಕ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ.

 

KEY WORDS : mysore-nomination-bjp-objects-congress-candidate