ಕೆಪಿಟಿಸಿಎಲ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಲೈನ್ ಮೆನ್ ಗೆ ತೀವ್ರ ಗಾಯ: ಎಫ್.ಐ.ಆರ್ ದಾಖಲು….

ಮೈಸೂರು,ಆ,18,2020(www.justkannada.in): ಲೈನ್ ಮೆನ್ ವಿದ್ಯುತ್ ಕಂಬ ಹತ್ತಿ  ದುರಸ್ತಿ ಮಾಡುವ ವೇಳೆ ಪವರ್ ಆನ್ ಮಾಡಿಸಿ ಬೇಜವಾಬ್ದಾರಿ ತೋರಿದ ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ದ ಇದೀಗ ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.mysore- FIR- KPTCL –officers- injury - irresponsibility

ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಉಪ ಶಾಖೆಯ ಜ್ಯೂನಿಯರ್ ಇಂಜಿನಿಯರ್ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್ ಜಾರ್ಜ್ ಪುಟ್ಟರಾಜು ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಆಗಸ್ಟ್ 5ರಂದು ಸಂಜೆ ರಾಂಪುರ ನಾಲೆ ಬಳಿ ಮಂಜು ಎಂಬ ಲೈನ್ ಮೆನ್ 11ಕೆವಿ ಪವರ್ ಲೈನ್ ದುರಸ್ತಿ  ಮಾಡುತ್ತಿದ್ದರು.

ಈ ವೇಳೆ  ಇಬ್ಬರು ಅಧಿಕಾರಿಗಳು ಲೈನ್ ಆನ್ ಮಾಡಿಸಿದ್ದು,ಇಬ್ಬರು ಅಧಿಕಾರಿಗಳ ಬೇಜವಾಬ್ದಾರಿಯಿಂದ ಲೈನ್ ಮನ್ ಗೆ ತೀವ್ರ ಗಾಯಗಳಾಗಿದೆ. ಗಾಯಗೊಂಡ ಮಂಜು ಅವರನ್ನ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.mysore- FIR- KPTCL –officers- injury - irresponsibility

ಮಂಜು ಪರ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಧಿಕಾರಿಳ ಬೇಜವಾಬ್ದಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- FIR- KPTCL –officers- injury – irresponsibility