ಮುತ್ತಪ್ಪ ರೈ ಅಂತ್ಯ ಸಂಸ್ಕಾರಕ್ಕೆ ಬರಬೇಡಿ: ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಮನವಿ

ಬೆಂಗಳೂರು, ಮೇ 15, 2020 (www.justkannada.in): ಮುತ್ತಪ್ಪ ರೈ ಅಂತ್ಯ ಸಂಸ್ಕಾರಕ್ಕೆ ಬರಬೇಡಿ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಮನವಿ ಪತ್ರವನ್ನು ಸಂಘಟನೆ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಹೀಗಿದೆ ಆ ಮನವಿ ಪತ್ರ…

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮತ್ತು 4R  ಗ್ರೂಪ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಎನ್ ಮುತ್ತಪ್ಪ ರೈ ದೇರ್ಲ (2-05-1952  to 15-05- 2020) ಬೆಳಗ್ಗಿನ ಜಾವ ಎರಡು ಗಂಟೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಬ್ಬರು ಮಕ್ಕಳು, ಮೂವರು ತಮ್ಮಂದಿರು , ಒಬ್ಬ ತಂಗಿ , ಕುಟುಂಬ ವರ್ಗ  ಮತ್ತು ಅಪಾರವಾದ ಅಭಿಮಾನಿಗಳನ್ನು  ಮತ್ತು ಬಂಧುವರ್ಗವನ್ನು ತ್ಯಜಿಸಿದ್ದಾರೆ . COVID-19 ನಿಯಮಾವಳಿ ಪ್ರಕಾರ ಕೇವಲ ಇಪ್ಪತ್ತೈದು ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ  ಬಿಡದಿಯ ಸ್ವಗ್ರಹದಲ್ಲಿ  ಮಧ್ಯಾಹ್ನದ ಮೇಲೆ ಕುಟುಂಬ ಸದಸ್ಯರಿಂದ ಮಾತ್ರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

ಅಂತ್ಯಕ್ರಿಯೆ ವಿಧಿ ವಿಧಾನದಲ್ಲಿ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಯಾರಿಗೂ ಭಾಗವಹಿಸಲು ಅವಕಾಶವಿರುವುದಿಲ್ಲ . ಆದ್ದರಿಂದ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ .

-ಪದಾಧಿಕಾರಿಗಳು

ಜಯ ಕರ್ನಾಟಕ, ಬೆಂಗಳೂರು