ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ…

ಬಳ್ಳಾರಿ,ಮಾರ್ಚ್,18,2021(www.justkannada.in): ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.jk

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ಶಾಲಿಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ನಾಗರತ್ನ(40) ಮಕ್ಕಳಾದ ಶೃತಿ(13), ಗಿರಿಜಾ(9) ಆತ್ಮಹತ್ಯೆಗೆ ಶರಣಾದವರು. ನಾಗರತ್ನ ಖಾಸಗಿ ಬ್ಯಾಂಕ್ ಗಳು ಸೇರಿ ಹಲವು ಕಡೆಗಳಲ್ಲಿ 15 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ.mother-commits-suicide-two-children

ಈ ಮಧ್ಯೆ ಸಾಲಬಾಧೆ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ನಾಗರತ್ನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಸಿರಗುಪ್ಪ ಠಾಣಾ ಪೊಲೀಸರು ಭೇಟಿ ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: mother -commits -suicide – two children