ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅಯೋಗ್ಯ: ಮುಸ್ಲೀಂರನ್ನ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು- ಹೆಚ್.ವಿಶ್ವನಾಥ್.

ಮೈಸೂರು,ಜನವರಿ,5,2023(www.justkannada.in): ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಒಬ್ಬ ಅಯೋಗ್ಯ. ಇವೆರಲ್ಲಾ ಸೇರಿಕೊಂಡು ಕನ್ನಡ ಭಾಷೆಗೆ ಕೇಸರಿ ಬಣ್ಣ ಬಳೆಯುತ್ತಿದ್ದಾರೆ. ಮುಸ್ಲೀಂರನ್ನ ಸಮ್ಮೇಳನದಿಂದ ಹೊರಗಿಟ್ಟಿರುವುದು ತಪ್ಪು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ಮುಸ್ಲೀಂರಲ್ಲಿ ಖ್ಯಾತ ನಾಮ ಸಾಹಿತಿಗಳು, ಕವಿಗಳು ಇದ್ದಾರೆ‌. ಈ ಸಾಹಿತ್ಯ ಸಮ್ಮೇಳನವನ್ನ ನಾನು ಬಹಿಷ್ಕರಿಸುತ್ತಿದ್ದೇನೆ. ಅದರ ಬದಲು ಬೆಂಗಳೂರಿನಲ್ಲಿ ನಡೆಯುವ ಜನ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ನಾಡಿನ ಎಲ್ಲಾ ಜನರು ಕನ್ನಡ ಸಾಹಿತ್ಯ ಸಮ್ಮೇಳನವನ್ನ ಬಹಿಷ್ಕರಿಸಬೇಕು. 20 ಕೋಟಿ ಖರ್ಚು ಮಾಡಿ ಏನು ಸಾಧನೆ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು.

ಮುಂಬೈಗೆ ಹುಡುಗಿಯರು ಕಳುಹಿಸಿದ್ದ ಆರೋಪ ಕುರಿತು  ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ಕೊಡುವಂತಹದ್ದು ಸರಿಯಲ್ಲ. ಹೋಗಲು ಕಾರಣ ನೀವೆ ನಿಮ್ಮ ವೈಫಲ್ಯ. ಅದನ್ನು ಮುಚ್ಚಿಕೊಳ್ಳಲು ಮಸಿ ಬಳಿಯಲು ಅಥವಾ ಹಿಟ್ ಅಂಡ್ ರನ್ ? ಯಾರು ಆ ಹೆಣ್ಣು ಮಕ್ಕಳು ಸಂಪೂರ್ಣ ಮಾಹಿತಿ ಕೊಡಿ. ಮಸಿ ಬಳಿದು ಹೋಗುವುದು ಸರಿಯಲ್ಲ. ಇದು ಒಬ್ಬ ನಾಯಕನ ಗುಣ ಲಕ್ಷಣ ಅಲ್ಲ. ಕುಮಾರಸ್ವಾಮಿ ಸಿನಿಮಾದವರು ಕಲ್ಪನಾ ಲಹರಿಯಲ್ಲಿ ಹೇಳಬಾರದು. ಹುಡುಗ ಹುಡುಗಿ ಮಿಕ್ಕಿದ್ದು ಪರದೆ ಮೇಲೆ ನೋಡಿ ಅಂತಾರೆ. ಕುಮಾರಸ್ವಾಮಿ ಹೇಳಿರುವುದು ಕಟ್ಟು ಕಥೆ ಸುಳ್ಳಿನ ಕಂತೆ. ನಾನು ಪ್ರತ್ಯಕ್ಷದರ್ಶಿಯಾಗಿದ್ದೆ ಯಾರೋ ಪಿಂಪ್ ಮಾತು ಕೇಳಿ ಈ ರೀತಿ ಮಾತು ಸರಿಯಲ್ಲ. ಯಾರದೋ ಮುಖಕ್ಕೆ ಮಸಿ ಬಳಿಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.  ಮೂರು ವರ್ಷದಿಂದ ಏನು ಮಾಡುತ್ತಿದ್ದಿರಿ ? ನಿಮ್ಮ ದುರಂಹಕಾರ ಜಿಗುಪ್ಸೆ ನಿಮ್ಮ ವರ್ತನೆಯಿಂದ ಎಲ್ಲರೂ ಪಕ್ಷ ಬಿಟ್ಟು ಹೋದರು. ಜವಾವ್ದಾರಿಯಿಲ್ಲದೆ ಮಾತನಾಡುತ್ತೀರಾ ಎಂದು ಕಿಡಿಕಾರಿದರು.

ವಿಧಾನಸೌಧದಲ್ಲಿ 10 ಲಕ್ಷ ಹಣ ಪತ್ತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಇಷ್ಟು ಭ್ರಷ್ಟಾಚಾರ ಹಿಂದೆ ಎಂದೂ ನೋಡಿರಲಿಲ್ಲ. ಬಹಳ ಜನ ಮಂತ್ರಿ, ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದೇನೆ. ಸುಳ್ಳು ಭ್ರಷ್ಟಾಚಾರ ಬಾಯಿಗೆ ಬಂದ ರೀತಿ ಮಾತನಾಡುವುದು ಜಾಸ್ತಿಯಾಗಿದೆ ಎಂದು ಗುಡಗಿದರು.

ರಸ್ತೆ, ಚರಂಡಿ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ ಎಂದಿದ್ದ ಬಿಜೆಪಿ ನಳೀನ್ ಕುಮಾರ್ ಕಟೀಲ್ ಹೇಳಿಕೆಗೂ  ಕಿಡಿಕಾರಿದ ಎಚ್ ವಿಶ್ವನಾಥ್ , ನನ್ನ ಕೇರಿಯವರಿಗೆ ಅದೇ ದೊಡ್ಡ ವಿಚಾರ ಹಾಗೂ ಅದೇ ಮುಖ್ಯವಾಗಿದೆ ಎಂದು ಟಾಂಗ್ ನೀಡಿದರು.

Key words: Kasapa -president -Mahesh Joshi –incompetent-MLC-  H. Vishwanath