ನಾಯಕತ್ವ ಬದಲಾವಣೆ ಮತ್ತು ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ- ಶಾಸಕ ಎಂ.ಪಿ ರೇಣುಕಾಚಾರ್ಯ.

ನವದೆಹಲಿ,ಜುಲೈ,22,2021(www.justkannada.in):  ಸಿಂ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ,  ನಾಯಕತ್ವ ಬದಲಾವಣೆ, ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.jk

ನವದೆಹಲ್ಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ನಾನು ಯಾರ ಬಗ್ಗೆಯೂ ದೂರು ನೀಡಲು ದೆಹಲಿಗೆ ಬಂದಿಲ್ಲ.  ರಾಜ್ಯದ ಪ್ರಸ್ತುತ ವಿದ್ಯಮಾನ ಬಗ್ಗೆ ಚರ್ಚಿಲು ಬಂದಿದ್ದೇನೆ.  ನಾನು ಯಾವಾಗಲೂ ನೇರವಾಗಿ ಮಾತನಾಡುವ ವ್ಯಕ್ತಿ.  ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿದ್ದೇನೆ. ಭೇಟಿಯಿಂದ ಸಂತಸವಾಗಿದೆ ಎಂದರು.

Key words: I’m not –talking- about -leadership change-MLA -MP Renukacharya