ಸಿದ್ಧರಾಮಯ್ಯರನ್ನ ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ಎಂ. ಲಕ್ಷ್ಮಣ್ ತಿರುಗೇಟು…..

ಮೈಸೂರು,ಜನವರಿ,25,2021(www.justkannada.in): ಸಿದ್ದರಾಮಯ್ಯ ಅವರನ್ನು  ಕುರುಬ ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂದು ಹೇಳಿಕೆ ನೀಡಿದ ಎಂಎಲ್‌ಸಿ ಎಚ್ ವಿಶ್ವನಾಥ್ ಗೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್,  ಬಹಿಷ್ಕಾರ  ಎಂಬುದು ಅಸಂವಿಧಾನಿಕ ಪದ. ವಿಶ್ವನಾಥ್ ಸಾಹಿತ್ಯ ಕೂಟದಲ್ಲಿ ಎಂ ಎಲ್ ಸಿ ಆಗಿದ್ದಾರೆ. ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ಧಿಗೊಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು  ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು. ಇದು ಅಕ್ಷಮ್ಯ ಅಪರಾಧ, ಇದಕ್ಕೆ ನಮ್ಮ ವಿರೋಧವಿದೆ. ನೀವು ಒಬ್ಬ ಲಾಯರ್ ಆಗಿದ್ದೀರಾ ನಿಮಗೂ ಅದು ಗೊತ್ತಿದೆ. ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.H.Vishwanath- statement –Siddaramaiah- society -e excluded –M. lakshman

ಎಸ್ ಟಿ ಸೋಮಶೇಖರ್ ಉದ್ಘಾಟನೆ ಮಂತ್ರಿ; ಪ್ರತಾಪ್‌ಸಿಂಹ ಜೋ ಬೈಡನ್‌ಗೆ ಸಮವಾದ ನಾಯಕರು..

ದೆಹಲಿ ಬೆಂಗಳೂರಿನಲ್ಲಿ ನಾಳೆ ರೈತರ ಪ್ರತಿಭಟನೆ ವಿಚಾರ  ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ರೈತರ ಟ್ರ್ಯಾಕ್ಟರ್ ಪೆರೇಡ್‌ಗೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದೆ. ಈ ಕಾಯ್ದೆ ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಉದ್ಘಾಟನೆ ಮಂತ್ರಿಯಾಗಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನ ಹರಿಸುತ್ತಿಲ್ಲ. ಪ್ರತಾಪ್‌ಸಿಂಹ ಒಬ್ಬ ಅಂತರಾಷ್ಟ್ರೀಯ ನಾಯಕರು. ಪ್ರತಾಪ್‌ಸಿಂಹ ಜೋ ಬೈಡನ್‌ಗೆ ಸಮವಾದ ನಾಯಕರು. ಇವರೆಲ್ಲಾ ಏಕೆ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿಲ್ಲ ? ಎಂದು ಪ್ರಶ್ನಿಸಿದರು.

ಇನ್ನು 6 ತಿಂಗಳಲ್ಲಿ ಇವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ

ಬಿಜೆಪಿಯವರು ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಸುಧಾಕರ್, ನಾರಾಯಣ್ ಗೌಡ, ಗೋಪಾಲಯ್ಯ, ಆರ್. ಶಂಕರ್, ಬಿ ಸಿ ಪಾಟೀಲ್ ಸೇರಿ ಹಲವರನ್ನು ಕಿತ್ತು ಹಾಕುತ್ತಾರೆ. ಇನ್ನು 6 ತಿಂಗಳಲ್ಲಿ ಇವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಅವರಿಗೆ ಈಗ ವಲಸಿಗರ ಅವಶ್ಯಕತೆ ಇಲ್ಲ ಸರ್ಕಾರ ಗಟ್ಟಿಯಾಗಿದೆ. ಇದು ವಲಸೆ ಹೋದವರ ಗತಿ ಎಂದು ಎಂ ಲಕ್ಷ್ಮಣ್ ಭವಿಷ್ಯ ನುಡಿದರು.

Key words: H.Vishwanath- statement –Siddaramaiah- society -e excluded –M. lakshman