ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಮಳೆರಾಯ ಅಡ್ಡಿ…

ಕೊಪ್ಪಳ,ಸೆಪ್ಟೆಂಬರ್,19,2020(www.justkannada.in) : ಕೊಪ್ಪಳದಲ್ಲಿ ಮಳೆಯಿಂದಾಗಿ ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುವ ಸ್ಥಿತಿ ಎದುರಾಗಿದೆ.

jk-logo-justkannada-logo

ಒಂದು ಕಡೆ ಕೊರೋನಾ ಹಾವಳಿಯಾದರೆ, ಮತ್ತೊಂದೆಡೆ ಮಳೆಯು ದೊಡ್ಡ ಸಮಸ್ಯೆ ಎನ್ನುವಂತ್ತಾಗಿದೆ. ಕೊರೋನ ಸೋಂಕಿಗೆ ತುತ್ತಾಗಿ ಮೃತಪಟ್ಟವರನ್ನು ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುವುದಕ್ಕೆ ಆರೋಗ್ಯ ಸಿಬ್ಬಂದಿ ಪರದಾಡುವಂತವಾಗಿದೆ.

 funeral-deceased-Corona-Rainfall-disruption

ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆರಾಯನ ಆರ್ಭಟದಿಂದ ಶವಾಗಾರದಲ್ಲಿ ನೀರು ನಿಂತಿದ್ದು, ಕೊಪ್ಪಳದ ಗವಿಮಠದ ಹಿಂಭಾಗದಲ್ಲಿರುವ ಶವಸಂಸ್ಕಾರ ಸ್ಥಳದಲ್ಲಿಯೂ ನೀರು ನಿಂತಿದ್ದು, ನೀರಿನಲ್ಲಿಯೇ ನಿಂತು ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈ ರೀತಿ ಅವ್ಯವಸ್ಥೆ ಕಂಡು ಬಂದರೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ.

 funeral-deceased-Corona-Rainfall-disruption

key words : funeral-deceased-Corona-Rainfall-disruption