ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ : ಚರ್ಚೆಗೆ ಆಹ್ವಾನಿಸಿ ಮನವಿ ಮಾಡಿದ ಡಿಸಿಎಂ ಲಕ್ಷ್ಮಣ್ ಸವದಿ  

ಬೆಂಗಳೂರು,ಡಿಸೆಂಬರ್,11,2020(www.justkannada.in) : ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ. ಇಂದು ರಾತ್ರಿ ಎಷ್ಟು ಹೊತ್ತಾದರೂ, ನಿಮಗೆ ಕಾಯುತ್ತೇನೆ. ಯಾವಾಗ ಬೇಕಾದರೂ ಮಾತುಕತೆಗೆ ಬನ್ನಿ.  ನನಗೆ ಯಾವುದೇ ತರಹದ ಅಹಂ ಇಲ್ಲ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.logo-justkannada-mysore

ಚಾಲಕರು, ನಿರ್ವಹಕರು ಕರ್ತವ್ಯಕ್ಕೆ ಹಾಜರಾಗಿ. ಸಂಘಟನೆಯ ಮುಖಂಡರ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ. ಒಬ್ಬೊಬ್ಬರ ಜೊತೆಗೂ ಮಾತನಾಡುವುದಕ್ಕೆ ಆಗುವುದಿಲ್ಲ. ಇಂದು ಸಂಜೆ ಇನ್ನೊಂದು ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

don’t,any,kind,ego,Employees,Strike,Attend,Duty,Minister,Lakshmana Sawadi

key words : don’t-any-kind-ego-Employees-Strike-Attend-Duty-Minister-Lakshmana Sawadi