ಮೈಸೂರು ದಸರಾ ಸರಳ ಆಚರಣೆಗೆ ನಿರ್ಧಾರ  – ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಮೈಸೂರು, ಆಗಸ್ಟ್, 21, 2020(www.justkannada.in) : ಕೊರೊನಾ ಹಿನ್ನೆಲೆ ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದಸರಾ ಸಂಬಂಧ ಹಲವು ಚರ್ಚೆ  ನಡೆಸಲಾಗಿದೆ. ಕೊರೊನಾದಿಂದಾಗಿ ನಾಡಹಬ್ಬವನ್ನು ಸರಳವಾಗಿ ಆಚರಿಸುವುದಕ್ಕೆ ತೀರ್ಮಾನಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.desision on nadahabba dasara simle celebration-cm b.s.yeddyurappa clear

ವಿಶ್ವವಿಖ್ಯಾತ ದಸರಾ ಸಂಬಂಧಿಸಿದಂತೆ ಜನರಲ್ಲಿ ಮನೆ ಮಾಡಿದ ಆತಂಕಕ್ಕೆ ತೆರೆ ಬಿದ್ದಿದ್ದು, ಕೊನೆಗೂ ಸರಳವಾಗಿ ಆಚರಣೆ ಮಾಡುವುದಕ್ಕೆ ಸರಕಾರವು ಮುಂದಾಗಿದೆ.

Key words :desision – nadahabba -dasara -simple celebration-cm b.s.yeddyurappa