ಸವಣೂರಲ್ಲಿ ವ್ಯಕ್ತಿಗೆ ಕೊರೊನಾ: ದೃಢಪಡಿಸಿದ ಜಿಲ್ಲಾಧಿಕಾರಿ ವಾಜಪೇಯ

ಹಾವೇರಿ, ಏಪ್ರಿಲ್ 04, 2020 (www.justkannada.in): ಜಿಲ್ಲೆಯ ಸವಣೂರಲ್ಲಿ ವ್ಯಕ್ತಿ ಯೋರ್ವನಿಗೆ ಕೊರೊನಾ ಸೋಂಕು ತಗಲಿರುವುದನ್ನು ಜಿಲ್ಲಾಧಿಕಾರಿ ವಾಜಪೇಯಿ ದೃಢಪಡಿಸಿದ್ದಾರೆ.
ಸೋಮವಾರ ಜಿಲ್ಕಾಢಳಿತ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಇನ್ನೂ ಒಬ್ಬನಲ್ಲಿಯು ಸೋಂಕು ಕಂಡು ಬಂದಿದೆ. ಆತನ ಅಂತಿಮ ಪರೀಕ್ಷಾ ವರದಿ ಬರಬೇಕಿದೆ ಎಂದು ಅವರು ತಿಳಿಸಿದರು.

ಒಟ್ಟು ಮೂವರು ಮುಂಬೈ ಯಿಂದ ಲಾರಿಯಲ್ಲಿ ಸವಣೂರಿಗೆ ಆಗಮಿಸಿದ್ದರೆಂದು ಈಮೂವರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಇದರಲ್ಲಿ ತಂದೆ ಹಾಗೂ ಮಗನಿಗೆ ಹಾಗೂ ಸೋಂಕು ಕಂಡುಬರುತ್ತದೆ. ೪೨ ವಯಸ್ಸಿನ ವ್ಯಕ್ತಿ ಗೆ ಕೊರೊನಾ ಇರುವುದು ಪತ್ತೆಯಾಗಿದೆ. ಇನ್ನೊಬ್ಬನಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಜಂಜೆ ವೇಳೆಗೆ ಲ್ಯಾಬ್ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.