ನಾಳೆ ಮೈಸೂರು ವಿವಿಯಲ್ಲಿ ‘ಅರಣ್ಯ ಆಧಾರಿತ ಆದಿವಾಸಿಗಳ ಸ್ಥಿತಿಗತಿ, ಎದುರಿಸುತ್ತಿರುವ ಸಮಸ್ಯೆಗಳು’ ಕುರಿತು ಸಂವಾದ ಕಾರ್ಯಕ್ರಮ…

ಮೈಸೂರು,ಸೆಪ್ಟಂಬರ್,8,2020(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯ, ಉನ್ನತಭಾರತ ಅಭಿಯಾನ ಯುಬಿಎ ವಿಭಾಗ, ಸಮಾಜಕಾರ್ಯ ಅಧ್ಯಯನ ವಿಭಾಗ,  ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು  ಸಂಶೋಧನಾ ಸಂಸ್ಥೆ, ನವದೆಹಲಿಯ  ಆದಿವಾಸಿ ಸಮನ್ವಯ ಮಂಚ್ ಮತ್ತು ರಾಜ್ಯ ಮೂಲ ಆದಿವಾಸಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಾಳೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.jk-logo-justkannada-logo

ಆದಿವಾಸಿ ಹಕ್ಕು ಅಧಿಕಾರ ಸ್ಥಾಪನೆ ದಿವಸ ದಿನಾಚಾರಣೆ-2020ರ ಅಂಗವಾಗಿ ‘ಅರಣ್ಯ ಆಧಾರಿತ ಆದಿವಾಸಿಗಳ ಸ್ಥಿತಿಗತಿ, ಎದುರಿಸುತ್ತಿರುವ ಸಮಸ್ಯೆಗಳು, ಅಗತ್ಯವಿರುವ ಸ್ಪಂದನೆ’  ಕುರಿತು ನಾಳೆ  ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಳೆ 2.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಕಾರ್ಯಕ್ರಮವನ್ನ ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಉದ್ಘಾಟಿಸಲಿದ್ದಾರೆ.Conversation- Program- Forest - Adivasis- Problems- Mysore university – Tomorrow

ರಾಜ್ಯ ಮೂಲ ಆದಿವಾಸಿ  ವೇದಿಕೆ ಅಧ್ಯಕ್ಷರಾದ ವಿಠಲ್ ಕೆ.ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಶಾಂತರಾಮ ಸಿದ್ಧಿ, ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು  ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಟಿ.ಟಿ ಬಸವನಗೌಡ, ಮೈಸೂರು ವಿವಿ ಕುಲಸಚಿವ(ಆಡಳಿತ) ಪ್ರೊ. ಆರ್ ಶಿವಪ್ಪ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಚಂದ್ರಮೌಳಿ ಆಗಮಿಸಲಿದ್ದಾರೆ.

Key words:  Conversation- Program- Forest – Adivasis- Problems- Mysore university – Tomorrow