ಬೆಂಗಳೂರು ಕರಗ ನಾಟಕ ಎಂದಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ದೇವಸ್ಥಾನದಲ್ಲಿ ಕ್ಷಮೆಯಾಚನೆ.

ಬೆಂಗಳೂರು,ಮಾರ್ಚ್,17,2023(www.justkannada.in): ಬೆಂಗಳೂರು ಕರಗವನ್ನ ನಾಟಕ ಎಂದು ಹೇಳಿಕೆ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಇದೀಗ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕ್ಷಮೆಯಾಚನೆ ಕೇಳಿದ್ದಾರೆ.

ಕಾಂಗ್ರಸ್ ಕಾರ್ಯಕ್ರಮವೊಂದರಲ್ಲಿ ಶಾಸಕ ಹ್ಯಾರಿಸ್ ಬೆಂಗಳೂರು ಕರಗವನ್ನ ನಾಟಕ ಎಂದಿದ್ದರು. ಈ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಕ್ಷಮೆಯಾಚನೆಯೂ ಮಾಡಿದ್ದರು. ಆದರೆ ಸುಮ್ಮನಾಗದ ತಿಗಳರ ಸಮಾಜದ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನೇರವಾಗಿ ಶಾಸಕ ಹ್ಯಾರಿಸ್ ತಿಗಳರ ಪೇಟೆಯಲ್ಲಿರುವ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ. ದೇವರ ಮೇಲೆ ನನಗೆ ಅಪಾರ  ಭಕ್ತಿ ಗೌರವವಿದೆ ಧರ್ಮಾರಾಯಸ್ವಾಮಿ ದೇವಾಲಯದಲ್ಲಿ ನಾನು ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.

Key words: Congress-MLA- Harris -apologizes – temple – Bengaluru -Karaga -drama.