ವೋಟ್ ಹಾಕಿ ಗೆಲ್ಲಿಸಿದ್ರೆ ಲಸಿಕೆ ಕೊಡ್ತೀರಾ: ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತೀರಾ..?? ಕೊರೋನಾ ಲಸಿಕೆ ಪ್ರಣಾಳಿಕೆ ಕುರಿತು ಹೆಚ್.ವಿಶ್ವನಾಥ್ ಖಂಡನೆ..

ಮೈಸೂರು,ಅಕ್ಟೋಬರ್,23,2020(www.justkannada.in): ಬಿಹಾರ ಚುನಾವಣೆಗೆ ನಿನ್ನೆಯಷ್ಟೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ ನೀಡಿದೆ.  ಈ ಬೆನ್ನಲ್ಲೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸಹ ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೀಗ ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.jk-logo-justkannada-logo

ಬಿಹಾರದಲ್ಲಿ ಪ್ರಣಾಳಿಕೆ ಬಿಡುಗಡೆ ಕೊರೊನಾ ಲಸಿಕೆ ಉಚಿತ ಕುರಿತು ಭರವಸೆ ವಿಚಾರ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್,  ವೋಟ್ ಹಾಕಿ ಗೆಲ್ಲಿಸಿದ್ರೆ ಲಸಿಕೆ ಕೊಡ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತೀರಾ..? ಎಂದು ಪ್ರಶ್ನಿಸಿದ್ದಾರೆ.bihar-election- Manifesto- corona vaccine-free-MLC-H.Vishwanath -condemns

ಕೊರೋನಾ ವಿಚಾರವನ್ನ ರಾಜಕೀಯಕ್ಕೆ ತರಬೇಡಿ. ವೋಟ್ ಹಾಕಿ ಗೆಲ್ಲಿಸಿದ್ರೆ ಲಸಿಕೆ ಕೊಡ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನ ಸಾಯಿಸಿ ಬಿಡ್ತಿರಾ? ಯಾವುದೇ ಪಕ್ಷವಾಗಲಿ ಕೊರೋನಾ ವಿಚಾರ ರಾಜಕೀಯ ಚರ್ಚೆಗೆ ಬಳಸಿಕೊಳ್ಳಬಾರದು. ಇದನ್ನ ನಾನು‌ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

Key words: bihar-election- Manifesto- corona vaccine-free-MLC-H.Vishwanath -condemns