ನಟ ದರ್ಶನ್​ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು

ಬೆಂಗಳೂರು,ನವೆಂಬರ್,01, 2020(www.justkannada.in)  : ಚಲನಚಿತ್ರ ನಟ ದರ್ಶನ್​ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.jk-logo-justkannada-logo

ನಟ ದರ್ಶನ್ ಇತ್ತೀಚೆಗೆ ಆರ್.ಆರ್​​.ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ಮಾಡಿದ್ದರು. ಈ ವೇಳೆ ಕೋವಿಡ್​​ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​​​ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಇಡೀ ದಿನ ದರ್ಶನ್​ ಪ್ರಚಾರದಲ್ಲಿ ತೊಡಗಿದ್ದರು. ದರ್ಶನ್​​ ಜೊತೆ ನಟಿ ಅಮೂಲ್ಯ ಮತ್ತು ನಿರ್ಮಾಪಕ ರಾಕ್​ಲೈನ್​​ ವೆಂಕಟೇಶ್​​ ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

Against,actor,Darshan,Under,Disaster,Management,Act,Case,record

key words : Against-actor-Darshan-Under-Disaster-Management-Act-Case-record