ಕೋವಿಡ್-19 ಸೋಂಕು ನಿವಾರಣೆಗೆ ವೈಮಾನಿಕ ಸೋಂಕು ನಿವಾರಕ ಸಿಂಪಡಣೆ: ಇದು ಕೆಲಸ ಮಾಡುತ್ತದೆಯೇ..? ಸುರಕ್ಷಿತವೇ..?

kannada t-shirts

ಬೆಂಗಳೂರು, ಜೂನ್ ,1, 2021(www.justkannada.in): ಕರ್ನಾಟಕ ಸರ್ಕಾರವು, ರಾಜ್ಯದ ನಗರ ಪ್ರದೇಶಗಳಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈಮಾನಿಕ ಸೋಂಕುನಿವಾರಕ ಸಿಂಪಡಣೆಯನ್ನು ಪ್ರಯತ್ನಿಸುವುದಾಗಿ ಘೋಷಿಸಿದೆ.jk

ಈ ಯೋಜನೆಯನ್ನು ಬೆಂಗಳೂರು ಮಹಾನಗರದಲ್ಲಿ ಸೋಮವಾರ ಪ್ರಾಯೋಗಿಕವಾಗಿ ಆರಂಭಿಸಬೇಕಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಬಳಸುವ ಸೋಂಕುನಿವಾರಕಗಳು ಹಾಗೂ ಜನರ ಮೇಲೆ ಅದು ಉಂಟು ಮಾಡಬಹುದಾಗಿರುವಂತಹ ಪರಿಣಾಮಗಳ ಬಗ್ಗೆ ತಜ್ಞರು ವ್ಯಕ್ತಪಡಿಸಿದಂತಹ ಕಾಳಜಿಗಳಿಂದಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಹಾಗಾದರೆ ಈ ಯೋಜನೆಯ ನಿಖರವಾದ ಉದ್ದೇಶ, ಜನರ ಮೇಲೆ ಬೀರಬಹುದಾಗಿರುವಂತಹ ಪರಿಣಾಮ, ಈ ವೈಮಾನಿಕ ಸೋಂಕುನಿವಾರಕ ಸಿಂಪಡಣೆ ಯೋಜನೆ  ನಿಜವಾಗಿಯೂ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತದೆಯೇ ಎಂಬ ವಿಷಯಗಳ ಕಡೆ ಒಮ್ಮೆ ಗಮನ ಹರಿಸೋಣ.

ವೈಮಾನಿಕ ಸಿಂಪಡಣೆ ಯೋಜನೆ ಎಂದರೇನು?

ಗಾಳಿಯಲ್ಲಿ ಹರಡುವ ಸರ್ಸ್ -ಕೊವಿಡ್-೨ ಸಾಂಕ್ರಾಮಿಕವನ್ನು ನಿಯಂತ್ರಿಸಲು ೧,೦೦೦ ಅಡಿಗಳ ಎತ್ತರದಿಂದ ಸಾವಯವ ಸೋಂಕುನಿವಾರಕಗಳನ್ನು ಸಿಂಪಡಿಸುವ ಯೋಜನೆ ಇದಾಗಿದೆ. ಏರಿಯಲ್‌ ವರ್ಕ್ಸ್ ಏರೊ ಎಲ್‌ಎಲ್‌ಪಿ ಎಂಬ ಹೆಸರಿನ ಖಾಸಗಿ ಸಂಸ್ಥೆ, ಮೇ 29ರಂದು ಬೆಂಗಳೂರಿನ ಜಕ್ಕೂರು ವಿಮಾನನಿಲ್ದಾಣದಲ್ಲಿ ಎರಡು-ಸೀಟುಗಳ ವಿಮಾನವನ್ನು ಬಳಸಿಕೊಂಡು ಈ ಸಿಂಪಡಣೆಯ ಪ್ರಾತ್ಯಕ್ಷಿಕೆಯನ್ನು ನೀಡಿತು.

ಸೋಮವಾರದಂದು, ಈ ಸಿಂಪಡಣೆಯನ್ನು ಮೊದಲು ಬೆಂಗಳೂರು ನಗರದ ಶಿವಾಜಿನಗರ ಹಾಗೂ ಕೆ.ಆರ್. ಮಾರುಕಟ್ಟೆ ಪ್ರದೇಶಗಳಲ್ಲಿ ಕೈಗೊಳ್ಳಲು, ಹಾಗೂ ಇದು ಉತ್ತಮ ಫಲಿತಾಂಶ ನೀಡಿದರೆ ಇತರೆ ಪ್ರದೇಶಗಳ ಮೇಲೂ ಪ್ರಯೋಗಿಸಲು ಯೋಜಿಸಲಾಗಿತ್ತು.

ಸಿಂಪಡಣೆಗೆ ಯಾವ ಸೋಂಕುನಿವಾರಕಗಳನ್ನು ಬಳಸಲಾಗುತ್ತದೆ? ಇದು ನಿಜವಾಗಿಯೂ ವೈರಾಣುವಿನ ವಿರುದ್ಧ ಹೋರಾಡುತ್ತದೆಯೇ?

ಪರ್‌ಸೇಪಿಯನ್ ಸೂಪರ್ ಐಯೊಡೈಸ್ಡ್ ವಾಟರ್ ಹಾಗೂ ‘ಸುಗರಧನ ಆರ್ಗಾನಿಕ ಆ್ಯಂಟಿಮೈಕ್ರೋಬಿಯಲ್ ಕಾನ್ಸ್ಂಟ್ರೇಟ್’ ಎಂಬ ನಾನ್-ಆಲ್ಕೊಹಾಲಿಕ್ ಸರ್ಫೇಸ್ ಸ್ಯಾನಿಟೈಸರ್ (ಸೋಂಕುನಿವಾರಣಾ ದ್ರವ) ಅನ್ನು ಸಿಂಪಡಿಸಲು ಪ್ರಸ್ತಾಪಿಸಲಾಗಿದೆ. ಈ ದ್ರಾವಣವನ್ನು ಅತೀ ಸಣ್ಣ ಏರೊಸಾಲ್‌ ಗಳನ್ನಾಗಿ ಮೊದಲಿಗೆ ಸಂಕುಚಿತಗೊಳಿಸಿ ಅದನ್ನು ಗಾಳಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಅತೀ ಸೂಕ್ಷ್ಮ ಗಾತ್ರದ ಈ ಏರೊಸಾಲ್‌ಗಳು ದೀರ್ಘಾವಧಿಯವರೆಗೆ ಗಾಳಿಯಲ್ಲಿ ಉಳಿಯುತ್ತವೆ ಮತ್ತು ನೆಲದ ಮೇಲೆ ಉರುಳುವ ಮುನ್ನ, ಸೂಕ್ಷ್ಮಾಣುಜೀವಿಗಳು (ಮೈಕ್ರೋಬ್‌ಗಳು), ಧೂಳಿನ ಕಣಗಳು, ಪರಾಗ ಹಾಗೂ ವೈರಾಣುವಿನೊಂದಿಗೆ ಬೆರೆಯುತ್ತದೆ. ಈ ಪ್ರಕಾರವಾಗಿ ಇದು ಗಾಳಿಯಲ್ಲಿ ಹರಡುವ ಸಾಧ್ಯತೆಯಿರುವ ಕೋವಿಡ್-19 ಸೋಂಕನ್ನು ನಿಯಂತ್ರಿಸುತ್ತದೆ ಎನ್ನುವುದು ಕಂಪನಿಯ ಅಭಿಪ್ರಾಯವಾಗಿದೆ.

ಆದರೆ ಈ ದ್ರಾವಣ ಮನುಷ್ಯರಿಗೆ ಸುರಕ್ಷಿತವೇ?

ತಜ್ಞರ ಪ್ರಕಾರ ಯಾವುದೇ ತಂತ್ರಜ್ಞಾನವನ್ನು, ಜನವಾಸವಿಲ್ಲದಿರುವಂತಹ ಪ್ರದೇಶದಲ್ಲಿ ಪರಿಶೀಲಿಸುವುದಕ್ಕೆ ಮುಂಚೆ, ಅದರಿಂದ ಸಂಭವಿಸಬಹುದಾಗಿರುವ ಗಂಡಾಂತರವನ್ನು ಅಂದಾಜಿಸುವುದು ಹಾಗೂ ಸಾರ್ವಜನಿಕರ ಅಭಿಪ್ರಯವನ್ನು ಪಡೆಯದೆ ಜನರ ವಾಸಸ್ಥಾನಗಳ ಮೇಲೆ ಪ್ರಯೋಗಿಸುವುದು ಸರಿಯಲ್ಲ. ಈ ರೀತಿ ಕಂಪನಿ ಹೇಳಿರುವ ಕ್ಷೇತ್ರ ಪ್ರಯೋಗಗಳನ್ನು ಮೊದಲು ಪ್ರಯೋಗಾಲಯಗಳಲ್ಲಿ ವೈಜ್ಞಾನಿಕವಾಗಿ ತಪಾಸಣೆ ಮಾಡಿ ಅದರ ಫಲಿತಾಂಶವನ್ನು ತಿಳಿದುಕೊಳ್ಳಬೇಕು. ಹಾಗಾಗಿ, ಈ ಸೋಂಕುನಿವಾರಣಾ ದ್ರಾವಣ ಮನುಷ್ಯರು, ಪ್ರಾಣಿಗಳು ಹಾಗೂ ಸಂಪರ್ಕಕ್ಕೆ ಬರುವ ಗಿಡ, ಮರಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ದೃಢಪಟ್ಟ ನಂತರ ಮಾತ್ರ ಈ ವೈಮಾನಿಕ ಸಿಂಪಡಣೆ ಪ್ರಕ್ರಿಯೆಯನ್ನು ಪರಿಗಣಿಸಬೇಕು.

೧,೦೦೦ ಅಡಿಗಳಷ್ಟು ಎತ್ತರದಿಂದ ವೈಮಾನಿಕ ಸಿಂಪಡಣೆಯನ್ನು, ಸೀಮಿತ ಪ್ರದೇಶದೊಳಗೆ ಡ್ರೋಣ್‌ಗಳನ್ನು ಬಳಸಿ ಬಹಳ ಕಡಿಮೆ ಎತ್ತರದಿಂದ ಮಾಡುವ ಸಿಂಪಡಣೆಗೆ ಹೋಲಿಸಲಾಗುವುದಿಲ್ಲ ಎನ್ನುವುದು ಸಾರ್ವಜನಿಕ ಆರೋಗ್ಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಮಾನವ ಸಂಪರ್ಕವನ್ನು ಕಡಿಮೆಗೊಳಿಸಲು ಡ್ರೋಣ್‌ ಗಳನ್ನು ಬಳಸಲಾಗುತ್ತದೆ. ಆದರೆ ದೊಡ್ಡ ಪ್ರದೇಶದ ಮೇಲೆ ಮಾಡುವ ವೈಮಾನಿಕ ಸಿಂಪಡಣೆಯಿಂದಾಗಿ ಸಂಭವಿಸಬಹುದಾದಂತಹ ಯಾವುದಾದರೂ ಅಡ್ಡಪರಿಣಾಮ ಬೃಹತ್ ಸಂಖ್ಯೆಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.

ಜೊತೆಗೆ, ಅತೀ ಹೆಚ್ಚಿನ ಜನಸಂಖ್ಯೆ ಇರುವಂತಹ ಸ್ಥಳಗಳಲ್ಲಿ ಇಂತಹ ಪ್ರಯೋಗಗಳನ್ನು ಕೈಗೊಳ್ಳುವ ಮುಂಚೆ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಬೆಕಾಗುತ್ತದೆ. ಒಂದು ವೇಳೆ ಪ್ರತಿ ಮನೆಗೆ ತೆರಳಿ ಅಭಿಪ್ರಯ ಪಡೆಯುವುದು ಸಾಧ್ಯಾವಾಗದಿರದ ಸಂದರ್ಭದಲ್ಲಿ ಆಯಾ ಪ್ರದೇಶದ ಜನಪ್ರತಿನಿಧಿಗಳ ಸಲಹೆ ಪಡೆಯುವುದು ಒಳಿತು. ಜೊತೆಗೆ ಪ್ರಕ್ರಿಯೆ ಹಾಗೂ ಪರಿಣಾಮದ ಕುರಿತು ಸಹ ಸಲಹೆ, ಸಮಾಲೋಚಿಸಬೇಕು. ಇದರಿಂದ ಸಂಭವಿಸಬಹುದಾಗಿರುವಂತಹ ಪರಿಣಾಮವನ್ನು ಜನಸಾಮಾನ್ಯರಿಗೆ ಮುಂಚಿತವಾಗಿಯೇ ತಿಳಿಸಿ, ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಗುವುದಿಲ್ಲ ಎಂದು ಅವರಲ್ಲಿ ವಿಶ್ವಾಸ ಮೂಡಿಸಬೇಕು.

ಕಂಪನಿ ಈ ಕಾಳಜಿಗಳ ಕುರಿತು ಏನು ಹೇಳುತ್ತದೆ?

ಕಂಪನಿಯು ಪರ್‌ಸೇಪಿಯನ್ ಸೂಪರ್ ಐಯೊಡೈಸ್ಡ್ ವಾಟರ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಅನುಮೋದಿಸಿರುವ ಒಂದು ಸೋಂಕುನಿವಾರಕವಾಗಿದೆ ಹಾಗೂ ಇದು ಚರ್ಮ ಹಾಗೂ ಯಾವುದೇ ಇತರೆ ಮೇಲ್ಮೈಗಳ ಮೇಲೆ ಬಳಸಲು ಸುರಕ್ಷಿತವಾಗಿದೆ ಎನ್ನುತ್ತದೆ. ಸುಗರಧನ ಆ್ಯಂಟಿಮೈಕ್ರೊಬಿಯಲ್ ಸೋಂಕುನಿವಾರಣಾ ದ್ರಾವಣವನ್ನು ಮಾನವರಿಗಾಗಿ ಔಷಧಗಳು (Pharmaceuticals for Human Use) ಐಸಿಹೆಚ್ ಮಾರ್ಗಸೂಚಿಗಳಿಗಾಗಿ ಇಂಟರ್‌ನ್ಯಾಷನಲ್ ಕೌನ್ಸಿಲ್ ಫಾರ್ ಹಾರ್ಮೊನೈಸೇಷನ್ ಆಫ್ ಟೆಕ್ನಿಕಲ್ ರಿಕ್ವೆöÊರ್‌ಮೆಂಟ್ಸ್ ಪ್ರಕಾರ ಪರಿಶೀಲಿಸಲಾಗಿದೆ. ಈ ಪರಿಶೀಲನೆಯ ಮೂಲಕ ಮಾನವ ಚರ್ಮದ ಮೇಲೆ ಇದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಎಂದು ರೇಡಿಯಂಟ್ ರೀಸರ್ಚ್ ಹಾಗೂ ಇತರೆ ಸಾವಯವ ಸರ್ಕಾರಿ ಏಜೆನ್ಸಿಗಳು ದೃಢಪಡಿಸಿವೆ, ಎಂದು ಕಂಪನಿ ವಿವರಿಸಿದೆ.

ಸಿಂಪಡಣೆ ಚಟುವಟಿಕೆಯನ್ನು ಯಾವ ರೀತಿ ಕೈಗೊಳ್ಳಲಾಗುತ್ತದೆ ಹಾಗೂ ಎಷ್ಟು ಸಮಯದವರೆಗೂ ಸಿಂಪಡಿಸಲಾಗುತ್ತಿದೆ?

ಸಿಂಪಡಣೆ ಮಾಡಲು ಅಮೇರಿಕನ್ ಚಾಂಪಿಯನ್ ಸ್ಕೌಟ್‌ನ ಎರಡು-ಸೀಟುಗಳ ವಿಮಾನವನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಇದು ಒಂದು ಗಂಟೆ ಅವಧಿಯ ಚಟುವಟಿಕೆಯಾಗಿದ್ದು, ವಿಮಾನವು 300 ಹೆಕ್ಟೇರ್ ವ್ಯಾಪ್ತಿಯಲ್ಲಿ ೧,೦೦೦ ಲೀಟರ್‌ಗಳಷ್ಟು ಸೋಂಕುನಿವಾರಕವನ್ನು ಸಿಂಪಡಿಸುವ ಸಾಮರ್ಥ್ಯ ಹೊಂದಿದೆ. ಇಂಧನ ತುಂಬಿಸಿಕೊಳ್ಳಲು ವಿಮಾನ ಪ್ರತಿ ೨೦ ನಿಮಿಷಗಳಿಗೊಮ್ಮೆ ಜಕ್ಕೂರು ವಿಮಾನ ನಿಲ್ದಾಣಕ್ಕೆ ಹಿಂದಿರುಗತ್ತದೆ.

ಮೂಲ: ಡೆಕ್ಕನ್ ಹೆರಾಲ್ಡ್  ನಲ್ಲಿ ಪ್ರಕಟಗೊಂಡಿರುವ ರಶೀದ್ ಕಪ್ಪನ್ ಅವರ ಸ್ಟೋರಿ

Key words: aerial-spraying-of-disinfectants-does-it-work-is-it-safe

website developers in mysore