• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Search
26.5 C
Bengaluru
Wednesday, February 1, 2023
  • About Us
  • Contact
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
JustKannada.in Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
JustKannada.in
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Home Front Page ನಾಳೆ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ..
  • Front Page
  • Media Masala
  • News

ನಾಳೆ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಲಾಂಛನ ಅನಾವರಣ..

By
webmaster
-
September 29, 2022
Share
Facebook
Twitter
Pinterest
WhatsApp
    Promotion

    ಬೆಂಗಳೂರು, ಸೆಪ್ಟಂಬರ್, 29,2022(www.justkannada.in): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಈ ಬಾರಿ ಗುಮ್ಮಟನಗರಿ ವಿಜಯಪುರದಲ್ಲಿ ನಡೆಯಲಿದ್ದು, ಸಮ್ಮೇಳನದ ಲಾಂಛನವನ್ನು ಸೆ.30(ನಾಳೆ) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅನಾವರಣ ಮಾಡಲಿದ್ದಾರೆ.

    ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳು, ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.

    ವಿಜಯಪುರ ಜಿಲ್ಲೆಯಾಗಿ ರೂಪುಗೊಂಡ ಮೇಲೆ ಇದೇ ಪ್ರಪ್ರಥಮ ಬಾರಿಗೆ ರಾಜ್ಯ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗುತ್ತಿದೆ.  ಕಳೆದ ಬಾರಿ ಕಲಬುರಗಿಯಲ್ಲಿ ರಾಜ್ಯ ಸಮ್ಮೇಳನ ನಡೆದ ಬಳಿಕ ಮತ್ತೊಂದು ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಅದೂ, ಗಡಿ ಜಿಲ್ಲೆಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಸಮ್ಮೇಳನ ಆಯೋಜಿಸಿರುವುದು ವಿಶೇಷ.

    ಆಲಮಟ್ಟಿ ಜಲಾಶಯ ಹೊಂದಿರುವ, ದ್ರಾಕ್ಷಿ ಬೀಡಾಗಿರುವ, ಗೋಳಗುಮ್ಮಟ ಖ್ಯಾತಿಯ ವಿಜಯಪುರ ನೆಲದ ಸೊಗಡನ್ನು ಒಳಗೊಂಡಂತೆ ರಾಜ್ಯ ಪತ್ರಕರ್ತರ ಸಮ್ಮೇಳನ ಲಾಂಛನವನ್ನು ಚಿತ್ರಕಲಾವಿದ ಮಂಜುನಾಥ ಮಾನೆ ಅವರು ರೂಪಿಸಿಕೊಟ್ಟಿದ್ದಾರೆ.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಸಾರಥ್ಯ ವಹಿಸಿಕೊಂಡ ಮೇಲೆ ಪ್ರತಿ ಸಮ್ಮೇಳನದಲ್ಲಿ ಆತಿಥ್ಯ ವಹಿಸಿಕೊಂಡ ಜಿಲ್ಲೆಯ ಸೊಗಡಿನ ಲಾಂಛನವನ್ನು ರೂಪಿಸುವ ಪರಿಪಾಠ ಪ್ರಾರಂಭವಾಗಿದೆ.

    ನವೆಂಬರ್ ಅಂತ್ಯದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು ಸಮ್ಮೇಳನಕ್ಕೆ ಬಿರುಸಿನ ಸಿದ್ಧತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅವರು ತಿಳಿಸಿದ್ದಾರೆ.

    Key words: 37th– State Conference -Journalists – tomorrow- logo – release

    • TAGS
    • 37th- State Conference
    • journalists
    • logo
    • release
    • Tomorrow
    Share
    Facebook
    Twitter
    Pinterest
    WhatsApp
      Previous articleಎರಡು ವರ್ಷದಲ್ಲಿ ಹಸ್ತಪ್ರತಿ, ತಾಳೆಗರಿಗೆ ಡಿಜಿಟಲ್ ರೂಪ: ಡಾ.ಸಿ.ಎನ್. ಅಶ್ವಥ್ ನಾರಾಯಣ್
      Next articleಮಕ್ಕಳ ದಸರಾ: ಗಿಚ್ಚಿ ಗಿಲಿಗಿಲಿ‌ ಖ್ಯಾತಿಯ ವಂಶಿಕಾ ಡ್ಯಾನ್ಸ್: 224 ವಿಧಾನಸಭಾ ಕ್ಷೇತ್ರಗಳ ಹೆಸರೇಳಿ ಅಚ್ಚರಿ ಮೂಡಿಸಿದ ಬಾಲ ಪ್ರತಿಭೆ.
      webmaster

      RELATED ARTICLESMORE FROM AUTHOR

      Front Page

      ಇದು ಎಲೆಕ್ಷನ್ ಬಜೆಟ್: ಚುನಾವಣೆ ಗುರಿಯಾಗಿಟ್ಟು ಮಂಡನೆ- ಡಿ.ಕೆ ಶಿವಕುಮಾರ್.

      Front Page

      ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್- ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಟೀಕೆ.

      Front Page

      ಇದು ಕೇವಲ ಘೋಷಣೆಯ ಜನಪ್ರಿಯತೆ ಬಜೆಟ್: ದಿನನಿತ್ಯ ವಸ್ತುಗಳ ಬೆಲೆ ಇಳಿಕೆ ಇಲ್ಲದಿರುವುದು ನಿರಾಸೆ ತಂದಿದೆ- ಎಂ.ಬಿ.ಪಾಟೀಲ್.

      - Advertisement -

      HOT NEWS

      Front Page

      ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ…

      Front Page

      ಭೂಗಳ್ಳರ ಪರ ನಿಲುವು ತಳೆದಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರ- ಎನ್ ಆರ್ ರಮೇಶ್...

      Front Page

      ಮೈಸೂರು ವಿವಿಯ ವಿಜ್ಞಾನಿಗಳಿಗೆ ಅಂತರಾಷ್ಟ್ರೀಯ ಮನ್ನಣೆ.

      Front Page

      ಸಚಿವ ಡಾ. ಕೆ. ಸುಧಾಕರ್ ಪತ್ನಿ ಹಾಗೂ ಮಗಳಿಗೂ ಕೊರೋನಾ ಸೋಂಕು ದೃಢ…

      JK on Instagram

      @justkannada
      3,059 Followers
      Follow
      ದಾವಣಗೆರೆ  ನಗರದಲ್ಲಿ ನೂತನ ' ಜಾನ್ಸಿ ಕಿಯಾ ಶೋರೂಮ್ '  ಅನ್ನು ಸಂಸದ ಜಿ. ಎಂ ಸಿದ್ದೇಶ್ವರ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ  ಉದ್ಘಾಟಿಸಿದರು. ಈ ವೇಳೆ ಜಾನ್ಸಿಕಿಯಾದ ಮ್ಯಾನೇಜಿಂಗ್ ಡೈರೆಕ್ಟರ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಮತ್ತಿತರರು ಹಾಜರಿದ್ದರು.
 #JUSTKANNADA #karnataka #BJP #Kiya
      ಕಬಿನಿ
      ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
 #karnataka #KarnatakaCM #JUSTKANNADA #narendramodi #BJP
      JustKannada.in
      Just Kannada is a global platform for all issues related to Kannada. At the very root, it’s a news-driven portal.
      Contact us: info@justkannada.in

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      March 30, 2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      June 16, 2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      January 5, 2021

      POPULAR CATEGORY

      • Front Page30101
      • News30091
      • Politics16025
      • Cinema3044
      • Crime2352
      • Sports1172
      • Tenders321
      • Media Masala237
      • Disclaimer
      • Privacy
      • Advertisement
      • Contact Us
      • Grievances
      © Designed with Love @ WebNock