ಹಾಡಹಗಲೇ ಸಿನಿಮೀಯ ರೀತಿ 25 ಕೆಜಿ ಚಿನ್ನ, ನಗದು ದೋಚಿದ ದರೋಡೆಕೋರರು….

ಹೊಸೂರು,ಜನವರಿ,22,2021(www.justkannada.in):  ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಸುಮಾರು 25 ಕೆ.ಜಿ ಚಿನ್ನ ಮತ್ತು ನಗದನ್ನ ದೋಚಿ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.jk

ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮುತೂಟ್ ಫೈನನ್ಸ್ ಕಚೇರಿಗೆ ನುಗ್ಗಿದ ಐದು ಮಂದಿ ದರೋಡೆಕೋರರು ಅಲ್ಲಿನ  ವ್ಯವಸ್ಥಾಪಕ  ಶ್ರೀನಿವಾಸ್ ರಾಘವ್ ಸೇರಿ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿದ್ದಾರೆ.25-kg-gold-cash-robbery-muthoot-finance-office

ನಂತರ ಕಚೇರಿಯಲ್ಲಿದ್ದ 25 ಕೆಜಿ ಚಿನ್ನ ಮತ್ತು 96 ಸಾವಿರ ನಗದನ್ನ ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: 25 kg –gold- cash –robbery- Muthoot Finance- office