Friday, September 11, 2026

BDA Apartments

Home Front Page ರಾಜ್ಯದಲ್ಲಿ ಈಗ ಚುನಾವಣೆ ನಡೆದ್ರೂ ಬಿಜೆಪಿಗೆ 140 ಸ್ಥಾನ ಖಚಿತ- ಮಾಜಿ ಸಚಿವ ಶ್ರೀರಾಮುಲು

ರಾಜ್ಯದಲ್ಲಿ ಈಗ ಚುನಾವಣೆ ನಡೆದ್ರೂ ಬಿಜೆಪಿಗೆ 140 ಸ್ಥಾನ ಖಚಿತ- ಮಾಜಿ ಸಚಿವ ಶ್ರೀರಾಮುಲು

ನವದೆಹಲಿ,ಜನವರಿ,19,2026 (www.justkannada.in): ರಾಜ್ಯದಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ 140 ಸ್ಥಾನಗಳನ್ನ  ಗೆಲ್ಲಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಸದ್ಯ ರಾಜ್ಯದಲ್ಲಿ ಬಿಜೆಪಿ  ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ.  ಬಿವೈ ವಿಜಯೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.  ಈಗ ರಾಜ್ಯದಲ್ಲಿ ಚುನಾವಣೆ ನಡೆದರೇ 140 ಸ್ಥಾನ ಗೆಲ್ಲುತ್ತೇವೆ. 2028ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ಮುಂದಿನ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಪ್ರತಿದಿನ ಕೊಲೆ ದರೋಡೆ ಪ್ಕರಣ ನಡೆಯತ್ತಿದೆ.  ಅತ್ಯಾಚಾರ ದರೋಡೆ ನಡೆಯುತ್ತಿದ್ದರೂ ಕ್ರಮ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ , ಗೃಹ ಸಚಿವರು ಇದ್ದರೂ ಇಲ್ಲದಂತಿದ್ದಾರೆ. ಬಳ್ಳಾರಿ ಗಲಭೇ ಪ್ರಕರಣದಲ್ಲೂ ಸೂಕ್ತ ಕ್ರಮ ಕೈಗೊಂಡಿಲ್ಲ ಭರತ್ ರೆಡ್ಡಿ ಸತೀಶ್ ರೆಡ್ಡಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ ಎಂದು ಶ್ರೀರಾಮುಲು ಕಿಡಿಕಾರಿದರು.

Key words: elections, state, BJP, 140 seats, Former Minister, Sriramulu