ಸಿದ್ದು-ರಂಗಪ್ಪ ಭೇಟಿ ಬಗ್ಗೆ ಮಾಜಿ ಸಚಿವ ಜಿ.ಟಿ ದೇವೇಗೌಡರು ಏನಂದ್ರು ಗೊತ್ತೆ..?

ಮೈಸೂರು,ಸೆ,16,2019(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯರಿಂದ ರಂಗಪ್ಪ ಅವರನ್ನ ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಜಿ.ಟಿ ದೇವೇಗೌಡರು,  ಸಿದ್ದರಾಮಯ್ಯ ರಂಗಪ್ಪ‌ ಮನೆಗೆ ಹೋಗಿದ್ರು ಅಂತ ನಮ್ ಹುಡುಗರು ಹೇಳಿದ್ರು‌. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿದ್ದಾರಂತೆ ಸಿದ್ಧರಾಮಯ್ಯ ಮೇಲಿನ ಪ್ರೀತಿಯಿಂದ ಹೀಗೆ ಹೇಳಿದ್ದಾರೆ ಅನ್ಸುತ್ತೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ,  ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅಂತ ರಂಗಪ್ಪ ನಿನ್ನೆಯೂ ಭಾಷಣದಲ್ಲಿ ಹೇಳಿದ್ರಂತೆ. ಇಂದು ಮತ್ತೆ ಹೇಳಿದ್ದಾರೆ ಅಂತ ಕೇಳಿದೆ. ರಂಗಪ್ಪ ಸಿದ್ದರಾಮಯ್ಯನವರ ಮೇಲಿನ ಪ್ರೀತಿಯಿಂದ ಹಾಗೇ ಹೇಳಿದ್ದಾರೆ‌ ಅನ್ಸತ್ತೆ. ರಂಗಪ್ಪನವರ ಮೇಲೆ ದೇವೇಗೌಡರಿಗೆ ಅತ್ಯಂತ ಪ್ರೀತಿ ಇದೆ. ಇವತ್ತಿಗೂ ದೇವೇಗೌಡರಿಗೆ ಪ್ರೀತಿ ಇರೋದು ರಂಗಪ್ಪನವರ ಮೇಲೆನೇ. ರಂಗಪ್ಪ ದೇವೇಗೌಡರ ಬಗ್ಗೆ ಏನೂ ಮಾತನಾಡಿದ್ದಾರೆ ಅನ್ನೋದಕ್ಕೆ ನಾನು ಪ್ರತಿಕ್ರಿಯೇ ನಿಡೋಲ್ಲ. ಆ ಬಗ್ಗೆ ಅವರನ್ನೆ ಕೇಳಿ ಎಂದು ಮಾಧ್ಯಮಗಳಿಗೆ ಹೇಳಿದರು.

ಅಂದು ಚಾಮರಾಜ ಕ್ಷೇತ್ರದಲ್ಲಿ ಹರೀಶ್‌ ಗೌಡನಿಗೆ ಟಿಕೆಟ್ ತಪ್ಪಿಸಿ ಸಾ.ರಾ.ಮಹೇಶ್ ಹಾಗೂ ರಂಗಪ್ಪ ಇಬ್ಬರು ಚುನಾವಣೆ ಮಾಡಿದ್ರು. ರಂಗಪ್ಪನವರೇ ಚಾಮರಾಜ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದ್ರೆ ಅವರನ್ನ ಜೆಡಿಎಸ್ ಹೇಗೆ ನಡೆಸಿಕೊಂಡಿತು ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರ‌ಸ್ವಾಮಿ ಹಾಗೂ ದೇವೇಗೌಡರ ಸಂಬಂಧ ರಂಗಪ್ಪನವರ ಜೊತೆ ಏನಿದೆ ಅನ್ನೋದು ನಮಗೆಲ್ಲ ಗೊತ್ತು. ಹಾಗಾಗಿ ರಂಗಪ್ಪನವರು ಜೆಡಿಎಸ್ ಬಗ್ಗೆ ಮಾತನಾಡಿರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಆ ಬಗ್ಗೆ ನೀವು ರಂಗಪ್ಪ ಬಳಿಯೇ ಕೇಳಿ ಎಂದರು.

: ಡಿ ಕೆ ಶಿವಕುಮಾರ್ ವಿಚಾರ ಮೈಸೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಚರ್ಚೆಯಾಗಿದೆ  ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ನಾನು ಸಭೆ ಹೋಗಿಲ್ಲ. ನನಗೆ ಏನೂ ಗೊತ್ತಿಲ್ಲ. ನನಗೆ ಯಾರೂ ಹೇಳಿಲ್ಲ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.

Key words: Former minister -GT Deve Gowda –reaction-about -Siddaramaiah-Rangappa’s-meet