Wednesday, August 12, 2026

BDA Apartments

Home Front Page ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸದಿರಲು ಸಿದ್ಧರಾಮಯ್ಯ ನಿರ್ಧಾರ.

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸದಿರಲು ಸಿದ್ಧರಾಮಯ್ಯ ನಿರ್ಧಾರ.

ಬೆಂಗಳೂರು,ಜನವರಿ,26,2022(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸದಿರಲು ಮಾಜಿ ಸಿಎಂ  ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.

ಈ ಕುರಿತು ಸಿದ್ಧರಾಮಯ್ಯ  ಅವರೇ ಸ್ಪಷ್ಟನೆ ನೀಡಿದ್ದಾರೆ.  8 ರಿಂದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ನನಗೆ ಒತ್ತಡ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸ್ಪರ್ಧೆಗೆ ಒತ್ತಡ ಇದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ  ಮಾಡಬಾರದು ಅಂದುಕೊಂಡಿದ್ದೇನೆ .  ಚುನಾವಣೆಗೆ ಇನ್ನು 1 ವರ್ಷ 2 ತಿಂಗಳಿದೆ.  ಎಲ್ಲಿಂದ ಸ್ಪರ್ಧಿಸಬೇಕು ಎಂದು ಇನ್ನು ನಿರ್ಧರಿಸಿಲ್ಲ  ಹೈಕಮಾಂಡ್ ಹೇಳಿದಕ ಕಡೆ ನಿಲ್ಲುತ್ತೇನೆ ಎಂದರು.

ಬಿಜೆಪಿ ಜೆಡಿಎಸ್  ಶಾಸಕರು ಬಂದು ಚರ್ಚಿಸಿರುವುದು ನಿಜ. ಬಿಜೆಪಿ  ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿಲ್ಲ. ನಾನಾಗಿಯೇ ಯಾವ ಶಾಸಕರ ಬಳಿಯೂ ಮಾತನಾಡಲ್ಲ. ಬಿಜೆಪಿ ಶಾಸಕರು ಅವರಾಗಿಯೇ ಬಂದರೇ ಮಾತನಾಡುತ್ತೇನೆ.   ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬಂದ ಶಾಸಕರಿಗೆ ಸ್ವಾಗತ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: former CM-Siddaramaiah-congress