Monday, August 3, 2026

BDA Apartments

Home Crime ಡಿಕ್ಕಿಯಲ್ಲಿ ಶವವಿಟ್ಟು ಕಾರಿಗೆ ಬೆಂಕಿ : ಚೆನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ 

ಡಿಕ್ಕಿಯಲ್ಲಿ ಶವವಿಟ್ಟು ಕಾರಿಗೆ ಬೆಂಕಿ : ಚೆನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ 

ಹಾಸನ,ಅಕ್ಟೋಬರ್,28,2020(www.justkannada.in) : ಜಿಲ್ಲೆಯ ಚೆನ್ನರಾಯಪಟ್ಟಣ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದ ದುಷ್ಕರ್ಮಿಗಳು ಆತನ ಶವವನ್ನು ಕಾರಿನಲ್ಲಿಟ್ಟು ಕಾರಿಗೆ ಬೆಂಕಿಯಿಟ್ಟು ಸುಟ್ಟಿರುವ ಭೀಕರ ಘಟನೆ ನಡೆದಿದೆ.jk-logo-justkannada-logo

ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದ್ದು, ರಸ್ತೆ ಮಧ್ಯೆಯೇ ಕಾರು ಸಮೇತ ವ್ಯಕ್ತಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ವ್ಯಕ್ತಿಯ ಗುರುತು ಸಿಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ವ್ಯಕ್ತಿಯ ಶವ ಹಾಗೂ ಕಾರನ್ನು ಇಲ್ಲಿಗೆ ತಂದು ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ಬೆಂಕಿ ಹಚ್ಚಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.Fire-in-car-collision-Incident-National Highway 75-near- Chennarayapatna

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹಿರಿಸಾವೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

key words : Fire-in-car-collision-Incident-National Highway 75-near- Chennarayapatna